ನವದೆಹಲಿ: ಬಾಂಬೆ ಹೈಕೋರ್ಟ್ಗೆ ಮಹಾರಾಷ್ಟ್ರ ಹೈಕೋರ್ಟ್ ಎಂದು ಮರುನಾಮಕರಣ ಮಾಡಲು ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ವಜಾಗೊಳಿಸಿದೆ.
ಮಹಾರಾಷ್ಟ್ರದ ಠಾಣೆಯ ವಿಶ್ರಾಂತ ನ್ಯಾಯಾಧೀಶ ವಿ.ಪಿ. ಪಾಟೀಲ್ ಎಂಬುವವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ವಿಕ್ರಂ ನಾಥ್ ಅವರಿದ್ದ ನ್ಯಾಯಪೀಠವು ತಳ್ಳಿಹಾಕಿದೆ.
‘ಇದು ಶಾಸಕಾಂಗವು ನಿರ್ಧರಿಸುವ ವಿಚಾರವಾಗಿದೆ. ಈ ವಿಚಾರವನ್ನು ಇಲ್ಲಿಗೆ ತರಲು ಯಾವ ಮೂಲಭೂತಹಕ್ಕಿನಿಂದಾಗಿ ನೀವು ಪೂರ್ವಗ್ರಹ ಪೀಡತರಾಗಿದ್ದೀರಿ’ ಎಂದೂ ನ್ಯಾಯಪೀಠ ಪ್ರಶ್ನಿಸಿದೆ.
ಹೈಕೋರ್ಟ್ಗಳಿಗೆಆಯಾ ರಾಜ್ಯದ ಹೆಸರುಗಳನ್ನಿಡಲು ಇತರ ರಾಜ್ಯಗಳ ಅಧಿಕಾರಿಗಳಿಗೂ ನಿರ್ದೇಶನ ನೀಡಬೇಕು ಎಂದು ಪಾಟೀಲ್ ಅವರು ಅರ್ಜಿಯಲ್ಲಿ ಕೋರಿದ್ದಾರೆ.
‘ಮಹಾರಾಷ್ಟ್ರ’ ಪದವು ಅಲ್ಲಿನ ಜನರ ಜೀವನದಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಪಡೆದಿರುವ ಪದವಾಗಿದೆ. ಆದ್ದರಿಂದ ಹೈಕೋರ್ಟ್ಗೆ ಈ ಹೆಸರಿಡಬೇಕು ಎಂದೂ ಅರ್ಜಿಯಲ್ಲಿ ಹೇಳಿದ್ದಾರೆ.