<p><strong>ಶ್ರೀನಗರ: </strong>ಇಲ್ಲಿನ ಹೊರವಲಯದಲ್ಲಿರುವ ಹೈದರ್ಪುರ ನಿವಾಸದಲ್ಲಿ ಬುಧವಾರ ನಿಧನರಾದ ಕಾಶ್ಮೀರ ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಶಾ ಗಿಲಾನಿ ಅವರ ಅಂತ್ಯಕ್ರಿಯೆ ಕಟ್ಟುನಿಟ್ಟಿನ ಭದ್ರತೆ ಮತ್ತು ನಿರ್ಬಂಧಗಳ ನಡುವೆ ಇಲ್ಲಿನ ಮಸೀದಿಯೊಂದರಲ್ಲಿ ಗುರುವಾರ ಮುಂಜಾನೆ ನೆರವೇರಿತು.</p>.<p>ಗಿಲಾನಿ ಅಪೇಕ್ಷೆಯಂತೆ, ಅವರ ನಿವಾಸದ ಸಮೀಪವಿರುವ ಮಸೀದಿಯ ಖಬರ್ಸ್ತಾನದಲ್ಲಿ ಸಮಾಧಿ ಮಾಡಲಾಯಿತು.</p>.<p>ದೇಶವಿರೋಧಿ ಶಕ್ತಿಗಳು ಈ ಸಂದರ್ಭವನ್ನು ಬಳಸಿಕೊಂಡು, ಕಣಿವೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಿಸಲು ಸಂಚು ರೂಪಿಸುತ್ತಿದ್ದಾರೆಂಬ ಗುಪ್ತಚರ ಇಲಾಖೆಯ ಸೂಚನೆಯ ಹಿನ್ನೆಲೆಯಲ್ಲಿ, ರಾತ್ರಿಯೇ ಅಂತ್ಯಕ್ರಿಯೆ ನಡೆಸುವಂತೆ ಅಧಿಕಾರಿಗಳು ಗಿಲಾನಿ ಕುಟುಂಬ ಸದಸ್ಯರಿಗೆ ತಿಳಿಸಿದ್ದರು.</p>.<p>ನಂತರ ತೀವ್ರ ಬಿಗಿ ಭದ್ರತೆಯಲ್ಲಿ ಗಿಲಾನಿ ಅವರ ಅಂತ್ಯಕ್ರಿಯೆ ನಡೆಯಿತು. ಈ ಸಂದರ್ಭದಲ್ಲಿ ಮೊಬೈಲ್ ಫೋನ್ಗಳನ್ನು ನಿರ್ಬಂಧಿಸಲಾಗಿತ್ತು. ‘ಬಿಗಿ ಪೊಲೀಸ್ ಭದ್ರತೆಯಲ್ಲಿ, ಇಸ್ಲಾಂ ಧಾರ್ಮಿಕ ವಿಧಿ ವಿಧಾನಗಳ ಪ್ರಕಾರವೇ ಖಬರ್ಸ್ತಾನದಲ್ಲಿ ಗಿಲಾನಿಯವರ ಮೃತದೇಹವನ್ನು ಸಮಾಧಿ ಮಾಡಲಾಯಿತು‘ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p>ಗಿಲಾನಿಯವರ ಪುತ್ರ ನಯೀಮ್, ‘ನನ್ನ ತಂದೆ ಈದ್ಗಾ ಮಸೀದಿಯಲ್ಲಿ ತನ್ನ ಸಮಾಧಿಯಾಗಬೇಕೆಂದು ಬಯಸಿದ್ದರು‘ ಎಂದು ಹೇಳಿದರು. ಹೈದರಾಪುರದ ಮಸೀದಿ ಸಮೀಪದ ಖಬರ್ಸ್ತಾನದಲ್ಲಿ ತನ್ನ ಸಮಾಧಿಯಾಗಬೇಕೆಂದು ಗಿಲಾನಿ ಬಯಸಿದ್ದಾಗಿ ಅವರ ಆಪ್ತರು ತಿಳಿಸಿದರು.</p>.<p>ಅಂತ್ಯಕ್ರಿಯೆ ವೇಳೆ, ಕಣಿವೆ ರಾಜ್ಯದಾದ್ಯಂತ ಜನರು ಗುಂಪು ಸೇರದಂತೆ ಹಲವು ನಿರ್ಬಂಧಗಳನ್ನು ವಿಧಿಸಲಾಗಿತ್ತು. ಸಂಭಾವ್ಯ ಅಹಿತಕರ ಘಟನೆಗಳನ್ನು ತಡೆಯಲು ಭದ್ರತಾ ಪಡೆಗಳನ್ನು ನಿಯೋಜಿಸಲಾಗಿತ್ತು.</p>.<p>ವದಂತಿ ಮತ್ತು ಸುಳ್ಳು ಸುದ್ದಿಗಳು ಹರಡದಂತೆ ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರಿ ಬಿಎಸ್ಎನ್ಎಲ್ನ ಪೋಸ್ಟ್-ಪೇಯ್ಡ್ ಸಂಪರ್ಕಗಳನ್ನು ಹೊರತುಪಡಿಸಿ ಮೊಬೈಲ್ ಫೋನ್ ಸೇವೆಗಳನ್ನು ಮತ್ತು ಇಂಟರ್ನೆಟ್ ಅನ್ನು ಸ್ಥಗಿತಗೊಳಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀನಗರ: </strong>ಇಲ್ಲಿನ ಹೊರವಲಯದಲ್ಲಿರುವ ಹೈದರ್ಪುರ ನಿವಾಸದಲ್ಲಿ ಬುಧವಾರ ನಿಧನರಾದ ಕಾಶ್ಮೀರ ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಶಾ ಗಿಲಾನಿ ಅವರ ಅಂತ್ಯಕ್ರಿಯೆ ಕಟ್ಟುನಿಟ್ಟಿನ ಭದ್ರತೆ ಮತ್ತು ನಿರ್ಬಂಧಗಳ ನಡುವೆ ಇಲ್ಲಿನ ಮಸೀದಿಯೊಂದರಲ್ಲಿ ಗುರುವಾರ ಮುಂಜಾನೆ ನೆರವೇರಿತು.</p>.<p>ಗಿಲಾನಿ ಅಪೇಕ್ಷೆಯಂತೆ, ಅವರ ನಿವಾಸದ ಸಮೀಪವಿರುವ ಮಸೀದಿಯ ಖಬರ್ಸ್ತಾನದಲ್ಲಿ ಸಮಾಧಿ ಮಾಡಲಾಯಿತು.</p>.<p>ದೇಶವಿರೋಧಿ ಶಕ್ತಿಗಳು ಈ ಸಂದರ್ಭವನ್ನು ಬಳಸಿಕೊಂಡು, ಕಣಿವೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಿಸಲು ಸಂಚು ರೂಪಿಸುತ್ತಿದ್ದಾರೆಂಬ ಗುಪ್ತಚರ ಇಲಾಖೆಯ ಸೂಚನೆಯ ಹಿನ್ನೆಲೆಯಲ್ಲಿ, ರಾತ್ರಿಯೇ ಅಂತ್ಯಕ್ರಿಯೆ ನಡೆಸುವಂತೆ ಅಧಿಕಾರಿಗಳು ಗಿಲಾನಿ ಕುಟುಂಬ ಸದಸ್ಯರಿಗೆ ತಿಳಿಸಿದ್ದರು.</p>.<p>ನಂತರ ತೀವ್ರ ಬಿಗಿ ಭದ್ರತೆಯಲ್ಲಿ ಗಿಲಾನಿ ಅವರ ಅಂತ್ಯಕ್ರಿಯೆ ನಡೆಯಿತು. ಈ ಸಂದರ್ಭದಲ್ಲಿ ಮೊಬೈಲ್ ಫೋನ್ಗಳನ್ನು ನಿರ್ಬಂಧಿಸಲಾಗಿತ್ತು. ‘ಬಿಗಿ ಪೊಲೀಸ್ ಭದ್ರತೆಯಲ್ಲಿ, ಇಸ್ಲಾಂ ಧಾರ್ಮಿಕ ವಿಧಿ ವಿಧಾನಗಳ ಪ್ರಕಾರವೇ ಖಬರ್ಸ್ತಾನದಲ್ಲಿ ಗಿಲಾನಿಯವರ ಮೃತದೇಹವನ್ನು ಸಮಾಧಿ ಮಾಡಲಾಯಿತು‘ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p>ಗಿಲಾನಿಯವರ ಪುತ್ರ ನಯೀಮ್, ‘ನನ್ನ ತಂದೆ ಈದ್ಗಾ ಮಸೀದಿಯಲ್ಲಿ ತನ್ನ ಸಮಾಧಿಯಾಗಬೇಕೆಂದು ಬಯಸಿದ್ದರು‘ ಎಂದು ಹೇಳಿದರು. ಹೈದರಾಪುರದ ಮಸೀದಿ ಸಮೀಪದ ಖಬರ್ಸ್ತಾನದಲ್ಲಿ ತನ್ನ ಸಮಾಧಿಯಾಗಬೇಕೆಂದು ಗಿಲಾನಿ ಬಯಸಿದ್ದಾಗಿ ಅವರ ಆಪ್ತರು ತಿಳಿಸಿದರು.</p>.<p>ಅಂತ್ಯಕ್ರಿಯೆ ವೇಳೆ, ಕಣಿವೆ ರಾಜ್ಯದಾದ್ಯಂತ ಜನರು ಗುಂಪು ಸೇರದಂತೆ ಹಲವು ನಿರ್ಬಂಧಗಳನ್ನು ವಿಧಿಸಲಾಗಿತ್ತು. ಸಂಭಾವ್ಯ ಅಹಿತಕರ ಘಟನೆಗಳನ್ನು ತಡೆಯಲು ಭದ್ರತಾ ಪಡೆಗಳನ್ನು ನಿಯೋಜಿಸಲಾಗಿತ್ತು.</p>.<p>ವದಂತಿ ಮತ್ತು ಸುಳ್ಳು ಸುದ್ದಿಗಳು ಹರಡದಂತೆ ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರಿ ಬಿಎಸ್ಎನ್ಎಲ್ನ ಪೋಸ್ಟ್-ಪೇಯ್ಡ್ ಸಂಪರ್ಕಗಳನ್ನು ಹೊರತುಪಡಿಸಿ ಮೊಬೈಲ್ ಫೋನ್ ಸೇವೆಗಳನ್ನು ಮತ್ತು ಇಂಟರ್ನೆಟ್ ಅನ್ನು ಸ್ಥಗಿತಗೊಳಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>