ಈ ಹಿನ್ನೆಲೆಯಲ್ಲಿ ಅಯೋಧ್ಯಾದಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. 51 ಅರ್ಚಕರು ಪೂಜೆ ನೆರವೇರಿಸಿದರು. ಬಳಿಕ ಶಿಲೆಯನ್ನು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಮಂಡಳಿಗೆ ಒಪ್ಪಿಸಲಾಯಿತು. ನೇಪಾಳದ ಜಾನಕಿ ಮಂದಿರದ ಅರ್ಚಕ ಮಹಾಂತ್ ತಾಪೇಶ್ವರ್ ದಾಸ್ ಅವರು ರಾಮ ಮಂದಿರ ಮಂಡಳಿಯ ಚಂಪತ್ ರಾಜ್ ಅವರಿಗೆ ಶಿಲೆಗಳನ್ನು ಹಸ್ತಾಂತರಿಸಿದರು ಎಂದು ಅಧಿಕಾರಿಗಳು ತಿಳಿಸಿದರು.