<p><strong>ಮುಂಬೈ:</strong> ಕೋವಿಡ್ ಮೂರನೇ ಅಲೆ ಹರಡುವಿಕೆಯನ್ನು ನೆಪವಾಗಿಸಿಕೊಂಡಿರುವ ಆಡಳಿತಾರೂಡ ಶಿವಸೇನಾ ಮುಂಬರುವ ಬೃಹನ್ ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ) ಚುನಾವಣೆಯನ್ನು ಮುಂದೂಡಲು ಸಂಚು ರೂಪಿಸಿದೆ ಎಂದು ಬಿಜೆಪಿ ಶಾಸಕ ಆಶಿಶ್ ಶೆಲಾರ್ ಆರೋಪಿಸಿದ್ದಾರೆ.</p>.<p>ಒಳಚರಂಡಿ ಸಂಸ್ಕರಣಾ ಘಟಕ ಸ್ಥಾಪಿಸಲು ಕರೆದಿರುವ ₹20,000 ಕೋಟಿ ಟೆಂಡರ್ನಲ್ಲಿ ಕಮಿಷನ್ ಪಡೆಯುವ ಸಲುವಾಗಿ ಶಿವಸೇನಾ ಪಾಲಿಕೆ ಚುನಾವಣೆಯನ್ನು ಮುಂದೂಡಲು ಪ್ರಯತ್ನಿಸುತ್ತಿದೆ ಎಂದು ಶೆಲಾರ್ ಆರೋಪಿಸಿದ್ದಾರೆ.</p>.<p>ಬಿಎಂಸಿ ಚುನಾವಣೆ ಮುಂದೂಡುವುದನ್ನು ಬಿಜೆಪಿ ತೀವ್ರವಾಗಿ ವಿರೋಧಿಸುತ್ತದೆ ಎಂದು ಶೆಲಾರ್ ಹೇಳಿದ್ದಾರೆ.</p>.<p>2014 ರಿಂದ 2019 ರವರೆಗೆ ಮಹಾರಾಷ್ಟ್ರದಲ್ಲಿ ಶಿವಸೇನಾ ಮತ್ತು ಬಿಜೆಪಿ ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದವು. 2017ರಲ್ಲಿ ನಡೆದ ಪಾಲಿಕೆ ಚುನಾವಣೆಯಲ್ಲಿ ಎರಡೂ ಪಕ್ಷಗಳು ಪ್ರತ್ಯೇಕವಾಗಿ ಸ್ಫರ್ಧಿಸಿದ್ದವು. ಈ ಚುನಾವಣೆಯಲ್ಲಿ ಶಿವಸೇನಾ 84, ಬಿಜೆಪಿ 82 ಸ್ಥಾನ ಪಡೆದಿದ್ದವು.</p>.<p><strong>ಇದನ್ನೂ ಓದಿ.. </strong><strong><a href="https://www.prajavani.net/karnataka-news/karnataka-faces-oxygen-shortfall-even-as-active-cases-still-on-higher-side-835155.html" target="_blank">ರಾಜ್ಯದಲ್ಲಿ 3.14 ಲಕ್ಷ ಸಕ್ರಿಯ ಪ್ರಕರಣ: ಆಮ್ಲಜನಕ ಕೊರತೆ ನೀಗಿಸದ ಕೇಂದ್ರ ಸರ್ಕಾರ</a></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ:</strong> ಕೋವಿಡ್ ಮೂರನೇ ಅಲೆ ಹರಡುವಿಕೆಯನ್ನು ನೆಪವಾಗಿಸಿಕೊಂಡಿರುವ ಆಡಳಿತಾರೂಡ ಶಿವಸೇನಾ ಮುಂಬರುವ ಬೃಹನ್ ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ) ಚುನಾವಣೆಯನ್ನು ಮುಂದೂಡಲು ಸಂಚು ರೂಪಿಸಿದೆ ಎಂದು ಬಿಜೆಪಿ ಶಾಸಕ ಆಶಿಶ್ ಶೆಲಾರ್ ಆರೋಪಿಸಿದ್ದಾರೆ.</p>.<p>ಒಳಚರಂಡಿ ಸಂಸ್ಕರಣಾ ಘಟಕ ಸ್ಥಾಪಿಸಲು ಕರೆದಿರುವ ₹20,000 ಕೋಟಿ ಟೆಂಡರ್ನಲ್ಲಿ ಕಮಿಷನ್ ಪಡೆಯುವ ಸಲುವಾಗಿ ಶಿವಸೇನಾ ಪಾಲಿಕೆ ಚುನಾವಣೆಯನ್ನು ಮುಂದೂಡಲು ಪ್ರಯತ್ನಿಸುತ್ತಿದೆ ಎಂದು ಶೆಲಾರ್ ಆರೋಪಿಸಿದ್ದಾರೆ.</p>.<p>ಬಿಎಂಸಿ ಚುನಾವಣೆ ಮುಂದೂಡುವುದನ್ನು ಬಿಜೆಪಿ ತೀವ್ರವಾಗಿ ವಿರೋಧಿಸುತ್ತದೆ ಎಂದು ಶೆಲಾರ್ ಹೇಳಿದ್ದಾರೆ.</p>.<p>2014 ರಿಂದ 2019 ರವರೆಗೆ ಮಹಾರಾಷ್ಟ್ರದಲ್ಲಿ ಶಿವಸೇನಾ ಮತ್ತು ಬಿಜೆಪಿ ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದವು. 2017ರಲ್ಲಿ ನಡೆದ ಪಾಲಿಕೆ ಚುನಾವಣೆಯಲ್ಲಿ ಎರಡೂ ಪಕ್ಷಗಳು ಪ್ರತ್ಯೇಕವಾಗಿ ಸ್ಫರ್ಧಿಸಿದ್ದವು. ಈ ಚುನಾವಣೆಯಲ್ಲಿ ಶಿವಸೇನಾ 84, ಬಿಜೆಪಿ 82 ಸ್ಥಾನ ಪಡೆದಿದ್ದವು.</p>.<p><strong>ಇದನ್ನೂ ಓದಿ.. </strong><strong><a href="https://www.prajavani.net/karnataka-news/karnataka-faces-oxygen-shortfall-even-as-active-cases-still-on-higher-side-835155.html" target="_blank">ರಾಜ್ಯದಲ್ಲಿ 3.14 ಲಕ್ಷ ಸಕ್ರಿಯ ಪ್ರಕರಣ: ಆಮ್ಲಜನಕ ಕೊರತೆ ನೀಗಿಸದ ಕೇಂದ್ರ ಸರ್ಕಾರ</a></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>