‘ಕಪ್ಪಣ್ ಅವರು ಪಿಎಫ್ಐ ಕಚೇರಿ ಕಾರ್ಯದರ್ಶಿ. ಸ್ಥಗಿತಗೊಂಡಿದ್ದ ದಿನಪತ್ರಿಕೆ ಗುರುತಿನ ಚೀಟಿ ತೋರಿಸಿ, ಹಾಥರಸ್ನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಿಸಲು ಆಗಮಿಸಿದ್ದರು’ ಎಂದು ಉತ್ತರ ಪ್ರದೇಶ ಸರ್ಕಾರವು ಇತ್ತೀಚೆಗೆ ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ ಹೇಳಿತ್ತು. ಪ್ರತಿಯಾಗಿ ಹೇಳಿಕೆ ದಾಖಲಿಸಿದ್ದ ಕೆಯುಡಬ್ಲ್ಯುಜೆ, ಪ್ರಕರಣದ ತನಿಖೆ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸ್ವತಂತ್ರವಾಗಿ ತನಿಖೆ ನಡೆಯಬೇಕು ಎಂದು ಆಗ್ರಹಿಸಿತ್ತು.