ನವದೆಹಲಿ: ಶ್ರದ್ಧಾಳ ಭೀಕರ ಹತ್ಯೆ ಘಟನೆಯ ಆರೋಪಿ ಅಫ್ತಾಬ್ ಅಮಿನ್ ಪೂನಾವಾಲಾ ತನ್ನ ಸಹಜೀವನದ ಗೆಳತಿಯ ಮೇಲೆ ಮೊದಲಿಗೆ 2020ರ ನವೆಂಬರ್ನಲ್ಲಿ ಹಲ್ಲೆ ನಡೆಸಿದ್ದ ಎಂಬುದು ತಿಳಿದುಬಂದಿದೆ.
ಅಫ್ತಾಬ್ ವಿರುದ್ಧ ಪೊಲೀಸರಿಗೆ ದೂರು ನೀಡಲುಆಗಶ್ರದ್ಧಾ ಮುಂದಾಗಿದ್ದರು. ಅಫ್ತಾಬ್ನ ಪೋಷಕರ ಮಧ್ಯಪ್ರವೇಶದಿಂದಾಗಿ ಹಿಂದೆ ಸರಿದಿದ್ದರು ಎಂದು ಆಕೆಯ ಮಾಜಿ ಸಹೋದ್ಯೋಗಿ ಕರಣ್ ಹೇಳಿದ್ದಾರೆ.
ಶ್ರದ್ಧಾ ಜೊತೆಗೆ 2021ರ ಮಾರ್ಚ್ವರೆಗೆ ಮುಂಬೈನಲ್ಲಿ ಕರಣ್ ಒಟ್ಟಿಗೆ ಕೆಲಸ ಮಾಡಿದ್ದರು. ಆಗ ನಡೆಸಿದ್ದ ವಾಟ್ಸ್ಆ್ಯಪ್ ಚರ್ಚೆಯ ವಿವರ ಈಗ ಜಾಲದಾಣದಲ್ಲಿ ಹೆಚ್ಚು ಹರಿದಾಡುತ್ತಿದೆ.
ಶ್ರದ್ಧಾಗೆ ನ್ಯಾಯ ಸಿಗಬೇಕು ಎಂದು ಒತ್ತಾಯಿಸಿರುವ ಕರಣ್, ತನಿಖೆಯಲ್ಲಿ ಪೊಲೀಸರಿಗೆ ಅಗತ್ಯ ಸಹಕಾರ ನೀಡಲಾಗುವುದು ಎಂದು ಹೇಳಿದ್ದಾರೆ.