<p><strong>ನವದೆಹಲಿ:</strong> ಕೆಲವು ಮುಸ್ಲಿಂಮರಿಗೆ ದೇಶದ ವಿಜ್ಞಾನಿಗಳ ಬಗ್ಗೆ ನಂಬಿಕೆಯಿಲ್ಲ ಎಂದು ಉತ್ತರ ಪ್ರದೇಶದ ಬಿಜೆಪಿ ಶಾಸಕ ಸಂಗೀತ್ ಸೋಮ್ ಆರೋಪಿಸಿದ್ದಾರೆ.</p>.<p>ಕೋವಿಡ್-19 ಲಸಿಕೆ ಸಂಬಂಧ ವಿರೋಧ ಪಕ್ಷಗಳಿಂದ ಎದುರಾಗಿರುವ ಆರೋಪಕ್ಕೆ ಪ್ರತಿಯಾಗಿ ಬಿಜೆಪಿ ಶಾಸಕರಾದ ಸಂಗೀತ್ ಸೋಮ್ ಈ ರೀತಿಯಾದ ಪ್ರತಿಕ್ರಿಯೆ ನೀಡಿದ್ದಾರೆ.</p>.<p>ದುರದೃಷ್ಟವಶಾತ್ ಕೆಲವು ಮುಸ್ಲಿಂಮರಿಗೆ ದೇಶದ ವಿಜ್ಞಾನಿಗಳು ಮತ್ತು ಪೊಲೀಸರ ಮೇಲೆ ನಂಬಿಕೆಯಿಲ್ಲ. ಅವರಿಗೆ ಪ್ರಧಾನ ಮಂತ್ರಿಯಲ್ಲೂ ನಂಬಿಕೆಯಿಲ್ಲ. ಅವರಿಗೆ ಪಾಕಿಸ್ತಾನದ ಮೇಲೆ ನಂಬಿಕೆಯಿದೆ. ಅವರು ಅಲ್ಲಿಗೆ ಹೋಗಬಹುದು. ಆದರೆ ವಿಜ್ಞಾನಿಗಳ ಬಗ್ಗೆ ಅನುಮಾನಪಡುತ್ತಾರೆ ಎಂದು ಸಂಗೀತ್ ಸೋಮ್ ಆರೋಪಿಸಿದರು.</p>.<p>ಇದನ್ನೂ ಓದಿ:<a href="https://www.prajavani.net/india-news/congress-always-abused-patriots-bjp-mp-pragya-thakur-on-godse-796131.html" itemprop="url">ದೇಶಭಕ್ತರನ್ನು ಕಾಂಗ್ರೆಸ್ ನಿಂದಿಸುತ್ತಾ ಬಂದಿದೆ; ಗೋಡ್ಸೆ ಬಗ್ಗೆ ಪ್ರಜ್ಞಾ ಹೇಳಿಕೆ </a></p>.<p>ಏತನ್ಮಧ್ಯೆ ಹೊಸ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿ ಗಡಿ ಪ್ರದೇಶದಲ್ಲಿ ಪ್ರತಿಭಟನೆ ನಡೆಸುತ್ತಿರುವವರು ರೈತರಲ್ಲ ಎಂದು ದೂರಿದರು. ಅಲ್ಲಿ ಧರಣಿ ನಡೆಸುತ್ತಿರುವವರು ರೈತರಲ್ಲ. ಬದಲಿಗೆ ರೈತ ವಿರೋಧಿಗಳು ಎಂದು ಹೇಳಿದರು.</p>.<p>ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಸಂಗೀತ್ ಸೋಮ್, ಅವರ ಆಡಳಿತದಲ್ಲಿ ಉತ್ತರ ಪ್ರದೇಶವು ಮೊಘಲ್ ಸುಲ್ತಾನವಾಗಿ ಮಾರ್ಪಾಟ್ಟಿತ್ತು. ಅವರು ಮೊಘಲ್ ಆಳ್ವಿಕೆಯ ಕೊನೆಯ ರಾಜನಾಗಿದ್ದು, ಮಗದೊಂದು ಅವಕಾಶ ಸಿಗಲಾರದು ಎಂದು ಟೀಕಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಕೆಲವು ಮುಸ್ಲಿಂಮರಿಗೆ ದೇಶದ ವಿಜ್ಞಾನಿಗಳ ಬಗ್ಗೆ ನಂಬಿಕೆಯಿಲ್ಲ ಎಂದು ಉತ್ತರ ಪ್ರದೇಶದ ಬಿಜೆಪಿ ಶಾಸಕ ಸಂಗೀತ್ ಸೋಮ್ ಆರೋಪಿಸಿದ್ದಾರೆ.</p>.<p>ಕೋವಿಡ್-19 ಲಸಿಕೆ ಸಂಬಂಧ ವಿರೋಧ ಪಕ್ಷಗಳಿಂದ ಎದುರಾಗಿರುವ ಆರೋಪಕ್ಕೆ ಪ್ರತಿಯಾಗಿ ಬಿಜೆಪಿ ಶಾಸಕರಾದ ಸಂಗೀತ್ ಸೋಮ್ ಈ ರೀತಿಯಾದ ಪ್ರತಿಕ್ರಿಯೆ ನೀಡಿದ್ದಾರೆ.</p>.<p>ದುರದೃಷ್ಟವಶಾತ್ ಕೆಲವು ಮುಸ್ಲಿಂಮರಿಗೆ ದೇಶದ ವಿಜ್ಞಾನಿಗಳು ಮತ್ತು ಪೊಲೀಸರ ಮೇಲೆ ನಂಬಿಕೆಯಿಲ್ಲ. ಅವರಿಗೆ ಪ್ರಧಾನ ಮಂತ್ರಿಯಲ್ಲೂ ನಂಬಿಕೆಯಿಲ್ಲ. ಅವರಿಗೆ ಪಾಕಿಸ್ತಾನದ ಮೇಲೆ ನಂಬಿಕೆಯಿದೆ. ಅವರು ಅಲ್ಲಿಗೆ ಹೋಗಬಹುದು. ಆದರೆ ವಿಜ್ಞಾನಿಗಳ ಬಗ್ಗೆ ಅನುಮಾನಪಡುತ್ತಾರೆ ಎಂದು ಸಂಗೀತ್ ಸೋಮ್ ಆರೋಪಿಸಿದರು.</p>.<p>ಇದನ್ನೂ ಓದಿ:<a href="https://www.prajavani.net/india-news/congress-always-abused-patriots-bjp-mp-pragya-thakur-on-godse-796131.html" itemprop="url">ದೇಶಭಕ್ತರನ್ನು ಕಾಂಗ್ರೆಸ್ ನಿಂದಿಸುತ್ತಾ ಬಂದಿದೆ; ಗೋಡ್ಸೆ ಬಗ್ಗೆ ಪ್ರಜ್ಞಾ ಹೇಳಿಕೆ </a></p>.<p>ಏತನ್ಮಧ್ಯೆ ಹೊಸ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿ ಗಡಿ ಪ್ರದೇಶದಲ್ಲಿ ಪ್ರತಿಭಟನೆ ನಡೆಸುತ್ತಿರುವವರು ರೈತರಲ್ಲ ಎಂದು ದೂರಿದರು. ಅಲ್ಲಿ ಧರಣಿ ನಡೆಸುತ್ತಿರುವವರು ರೈತರಲ್ಲ. ಬದಲಿಗೆ ರೈತ ವಿರೋಧಿಗಳು ಎಂದು ಹೇಳಿದರು.</p>.<p>ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಸಂಗೀತ್ ಸೋಮ್, ಅವರ ಆಡಳಿತದಲ್ಲಿ ಉತ್ತರ ಪ್ರದೇಶವು ಮೊಘಲ್ ಸುಲ್ತಾನವಾಗಿ ಮಾರ್ಪಾಟ್ಟಿತ್ತು. ಅವರು ಮೊಘಲ್ ಆಳ್ವಿಕೆಯ ಕೊನೆಯ ರಾಜನಾಗಿದ್ದು, ಮಗದೊಂದು ಅವಕಾಶ ಸಿಗಲಾರದು ಎಂದು ಟೀಕಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>