ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಗಡಿ ನಿರ್ಧಾರವಾಗಿ, ವಿಧಾನ ಸಭಾ ಚುನಾವಣೆಗಳು ಪೂರ್ಣ ಗೊಂಡ ಬಳಿಕ ರಾಜ್ಯದ ಸ್ಥಾನಮಾನ ವನ್ನು ಮರು ಸ್ಥಾಪಿಸಲಾಗು ತ್ತದೆ ಎಂದುಕೇಂದ್ರ ಗೃಹಸಚಿವಅಮಿತ್ ಶಾ ಭರವಸೆ ನೀಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರಕ್ಕೆ ಮೂರು ದಿನಗಳ ಭೇಟಿಗಾಗಿ ಶನಿವಾರ ಶ್ರೀನಗರಕ್ಕೆ ಆಗಮಿಸಿರುವ ಅವರು, ಯೂತ್ ಕ್ಲಬ್ ಸದಸ್ಯರ ಜತೆಗಿನ ಸಂವಾದದಲ್ಲಿ ಈ ಭರವಸೆ ನೀಡಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಶಾಂತಿಯುತ ಮತ್ತು ಅಭಿವೃದ್ಧಿ ಹೊಂದಿದ ಕಣಿವೆ ನಿರ್ಮಾಣ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕಾಶ್ಮೀರದ ಯುವಕರ ಬೆಂಬಲವನ್ನು ಶಾ ಕೋರಿದರು.