ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುರ್ಗಮ ಪ್ರದೇಶದಲ್ಲಿ ಸಿಲುಕಿದ್ದ ಐಟಿಬಿಪಿ 16 ಸಿಬ್ಬಂದಿ ರಕ್ಷಣೆ

Last Updated 2 ಅಕ್ಟೋಬರ್ 2021, 15:04 IST
ಅಕ್ಷರ ಗಾತ್ರ

‌ಪಿತೋರಗಡ, ಉತ್ತರಾಖಂಡ: ಚೀನಾ-ಭಾರತ ಗಡಿಯ ಸಮೀಪದ ಕುಟಿ ಕಣಿವೆಯಲ್ಲಿ ಪ್ರತಿಕೂಲ ಹವಾಮಾನದಿಂದಾಗಿ ಸಿಲುಕಿಕೊಂಡಿದ್ದ ಐಟಿಬಿಪಿ 16 ಸಿಬ್ಬಂದಿಯನ್ನು ಭಾರತೀಯ ಸೇನೆಯ ಪಂಚಶುಲ್ ಬ್ರಿಗೇಡ್ ಶನಿವಾರ ರಕ್ಷಿಸಿದೆ.

ಐಟಿಬಿಪಿ ಸಿಬ್ಬಂದಿಯು ಕಣಿವೆಯ ದುರ್ಗಮ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದಾಗ ಪ್ರತಿಕೂಲ ಹವಾಮಾನದಿಂದಾಗಿ ಕಷ್ಟಕ್ಕೆ ಸಿಲುಕಿಕೊಂಡರು ಎಂದು ಸೇನಾ ಅಧಿಕಾರಿಯೊಬ್ಬರು ತಿಳಿಸಿದರು.

‘ಭಾರತ-ಚೀನಾ ಗಡಿಯ ಬಳಿ ಇರುವ ಕುಟಿ ಕಣಿವೆಯ ದುರ್ಗಮ ಪ್ರದೇಶದಲ್ಲಿ ಐಟಿಬಿಪಿ ಸಿಬ್ಬಂದಿ ಸಿಕ್ಕಿಬಿದ್ದಿದ್ದಾರೆ ಎಂದು ನಮ್ಮ ಸೈನ್ಯದ ಪಂಚಶುಲ್ ಬ್ರಿಗೇಡ್‌ಗೆ ಮಾಹಿತಿ ಬಂದಾಗ, ಅವರು ತಕ್ಷಣ ಕಾರ್ಯಪ್ರವೃತ್ತರಾಗಿ ಸಿಬ್ಬಂದಿಯನ್ನು ರಕ್ಷಿಸಿದರು’ ಎಂದು ಪಂಚಶುಲ್ ಬ್ರಿಗೇಡ್‌ನ ಕ್ಯಾಪ್ಟನ್ ಕುಲದೀಪ್ ಸಿಂಗ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT