ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಲ್ವಾಮದಲ್ಲಿ ಭದ್ರತಾ ಪಡೆಗಳ‌ ಕಾರ್ಯಾಚರಣೆ: ಮಸೀದಿಯಲ್ಲಿ ಅಡಗಿಕೊಂಡ ಉಗ್ರ

ಎನ್‌ಕೌಂಟರ್‌ನಲ್ಲಿ ಇಬ್ಬರು ಭಯೋತ್ಪಾದಕರ ಹತ್ಯೆ
Last Updated 9 ಏಪ್ರಿಲ್ 2021, 6:01 IST
ಅಕ್ಷರ ಗಾತ್ರ

ಶ್ರೀನಗರ: ಪುಲ್ವಾಮಾ ಜಿಲ್ಲೆಯ ಟ್ರಾಲ್ ಪ್ರದೇಶದಲ್ಲಿ ಗುರುವಾರ ರಾತ್ರಿಯಿಡೀ ಎನ್‌ಕೌಂಟರ್‌ ನಡೆಸಿದ ಭದ್ರತಾ ಪಡೆಗಳು ಇಬ್ಬರು ಉಗ್ರರನ್ನು ಹೊಡೆದುರುಳಿಸಿವೆ.

ಇನ್ನೊಂದೆಡೆ, ಶೋಪಿಯಾನ್‌ ಪಟ್ಟಣದಲ್ಲಿ ಗುರುವಾರ ಸಂಜೆ ಆರಂಭವಾದ ಎನ್‌ಕೌಂಟರ್‌ನಲ್ಲಿ ಮೂವರು ಉಗ್ರರನ್ನು ಭದ್ರತಾಪಡೆಗಳು ಹತ್ಯೆ ಮಾಡಿವೆ. ನಾಲ್ವರು ಯೋಧರು ಗಾಯಗೊಂಡಿದ್ದಾರೆ. ಈಗ ಎನ್‌ಕೌಂಟರ್‌ ಸ್ಥಗಿತಗೊಳಿಸಲಾಗಿದೆ. ಈ ಘಟನೆಯ ನಂತರ ಮಸೀದಿಯೊಳಗೆ ಭಯೋತ್ಪಾದಕನೊಬ್ಬ ಅಡಗಿ ಕುಳಿತಿರುವ ವಿಷಯ ಬೆಳಕಿಗೆ ಬಂದಿದೆ. ಪೊಲೀಸರು ಅವನನ್ನು ಹೊರತರುವ ಪ್ರಯತ್ನ ಮಾಡುತ್ತಿದ್ಧಾರೆ.

‘ಮಸೀದಿಯೊಳಗೆ ಅಡಗಿಕೊಂಡಿರುವ ಭಯೋತ್ಪಾದಕ ಹೊರಗೆ ಬಂದು ಶರಣಾಗುವಂತೆ ಮನವೊಲಿಸಲು ಭಯೋತ್ಪಾದಕನ ಸಹೋದರ ಮತ್ತು ಸ್ಥಳೀಯ ನಿವಾಸಿ ಇಮಾಮ್‌ಸಾಹೇಬ್‌ ಎಂಬುವವರನ್ನು ಮಸೀದಿ ಒಳಗೆ ಕಳುಹಿಸಲಾಗಿದೆ. ಮಸೀದಿಯನ್ನು ರಕ್ಷಿಸುವ ಪ್ರಯತ್ನಗಳು ನಡೆಯುತ್ತಿವೆ‘ ಎಂದು ಪೊಲೀಸರು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT