ಹೈದರಾಬಾದ್: ‘ಶ್ರೀ ವೆಂಕಟೇಶ್ವರ ಭಕ್ತಿ ಚಾನಲ್’ನ (ಎಸ್ವಿಬಿಸಿ) ಕನ್ನಡ ಮತ್ತು ಹಿಂದಿ ಚಾನಲ್ಗಳು ಯುಗಾದಿ ದಿನವಾದ ಏಪ್ರಿಲ್ 13ರಂದು ಆರಂಭವಾಗಲಿವೆ.
ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ನಿರ್ವಹಿಸುವ ‘ಶ್ರೀ ವೆಂಕಟೇಶ್ವರ ಭಕ್ತಿ ಚಾನಲ್’ ಸದ್ಯ ತೆಲುಗು ಮತ್ತು ತಮಿಳಿನಲ್ಲಿ ಅಪಾರ ಜನಪ್ರಿಯವಾಗಿದೆ. ಅಧ್ಯಾತ್ಮದ ಈ ಚಾನಲ್ ಅನ್ನು ಹೊಸದಾಗಿ ಎರಡು ಭಾಷೆಗಳಲ್ಲಿ ಆರಂಭಿಸುವ ಬಗ್ಗೆ ಎಸ್ವಿಬಿಸಿಯ ಮಂಡಳಿ ಬುಧವಾರ ನಿರ್ಧಾರ ಕೈಗೊಂಡಿದೆ.
ಭಕ್ತಿ ಸಂಗೀತವನ್ನು ಪ್ರಧಾನವಾಗಿಟ್ಟುಕೊಂಡು ಎಸ್ವಿಬಿಸಿ ರೇಡಿಯೊ ಆರಂಭಿಸಲು ಸಹ ಟಿಟಿಡಿ ಉದ್ದೇಶಿಸಿದೆ.