‘ಪ್ರಜಾಪ್ರಭುತ್ವ ತತ್ವಗಳಿಗನುಸಾರ ಸಮಾಜದ ಎಲ್ಲಾ ವರ್ಗಗಳ ಆಕಾಂಕ್ಷೆಗಳು ಮತ್ತು ಕಾಳಜಿಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರವು ಆಡಳಿತ ನಡೆಸಬೇಕು. ಆದರೆ, ಈ ಕಾಯ್ದೆಯು ನಿರಾಶ್ರಿತರ ಸಂಕಷ್ಟವನ್ನು ಪರಿಗಣಿಸಿ ಬೆಂಬಲವನ್ನು ನೀಡುವ ಬದಲು ನಿರ್ದಿಷ್ಟ ಧರ್ಮ ಮತ್ತು ದೇಶದ ವ್ಯಕ್ತಿಗಳೊಂದಿಗೆ ತಾರತಮ್ಯ ಮಾಡುತ್ತಿದೆ’ ಎಂದು ಸ್ಟಾಲಿನ್ ಹೇಳಿದರು.