‘ಅರ್ಜಿದಾರರು ರಾಜಕಾರಣಿಗಳು. ಎರಡು ರಾಜಕೀಯ ಪಕ್ಷಗಳ ನಡುವಿನ ಜಿದ್ದಾಜಿದ್ದಿಯೇ ಇಲ್ಲಿ ಪ್ರಮುಖವಾಗಿದೆ. ರಮಣ್ಸಿಂಗ್, ಸಂಬಿತ್ ಪಾತ್ರ ಅವರ ಟ್ವೀಟ್ಗಳು ಕಾಂಗ್ರೆಸ್ ಮುಖಂಡರನ್ನು ಕೆರಳುವಂತೆ ಮಾಡಿದ್ದರೂ, ಅವುಗಳಿಂದ ಸಾರ್ವಜನಿಕ ಶಾಂತಿಗೆ ಧಕ್ಕೆಯಾಗಿಲ್ಲ ಎಂಬುದಾಗಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಈಗ ಮತ್ತೆ ಹೈಕೋರ್ಟ್ ಮೊರೆ ಹೋಗುವುದರಲ್ಲಿ ಅರ್ಥವಿಲ್ಲ’ ಎಂದು ಛತ್ತೀಸ್ಗಡ ಸರ್ಕಾರ ಪರ ವಕೀಲ ಎ.ಎಂ.ಸಿಂಘ್ವಿ ವಾದಿಸಿದರು.