ಈ ಸಂಬಂಧ ಗುರುವಾರ ಹಿಂದಿಯಲ್ಲಿ ಹೇಳಿಕೆ ಬಿಡುಗಡೆ ಮಾಡಿದ ಆರೆಸ್ಸೆಸ್ ಅಂಗಸಂಸ್ಥೆಯು, ಭಾರತದ ಸಾಂಪ್ರದಾಯಿಕ ಮತ್ತು ಸಂಸ್ಕೃತಿಯ ಭಾಗವಾಗಿರುವ ಹೊರತಾಗಿಯೂ, ಬುಡಕಟ್ಟು ಸಮಾಜವು ಹಲವು ವರ್ಷಗಳ ಕಾಲ ನಿರ್ಲಕ್ಷ್ಯಕ್ಕೆ ಒಳಗಾಗಬೇಕಾಗಿತ್ತು. ಇದೀಗ ಮುರ್ಮು ಅವರನ್ನು ಎನ್ಡಿಎನ ರಾಷ್ಟ್ರಪತಿ ಅಭ್ಯರ್ಥಿಯಾಗಿಸಿರುವುದು ಸಾಮಾಜಿಕ ಬದಲಾವಣೆ ತರುವ ಕ್ರಮವಾಗಿದೆ ಎಂದು ಹೇಳಿದೆ.ಭಾರತದಲ್ಲಿ 12 ಕೋಟಿ ಬುಡಕಟ್ಟು ಜನರಿದ್ದಾರೆ.