ನವದೆಹಲಿ:ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನುಕೇಂದ್ರ ಸಚಿವ ನಿತಿನ್ ಗಡ್ಕರಿ ಗುಣಗಾನ ಮಾಡಿದ್ದಾರೆ.
ದೇಶಕ್ಕೆಉದಾರ ಆರ್ಥಿಕ ನೀತಿಯ ಅಡಿಪಾಯ ಹಾಕಿ, ಬಡವರಿಗೆಆರ್ಥಿಕ ಸುಧಾರಣೆಗಳ ಪ್ರಯೋಜನಗಳನ್ನು ಒದಗಿಸಿದರು. ಇದರ ಪರಿಣಾಮ ದೇಶದ ಆರ್ಥಿಕತೆ ವೇಗ ಪಡೆಯಲು ಸಾಧ್ಯವಾಯಿತು ಎಂದು ಹೊಗಳಿದ್ದಾರೆ.
The amount of work done in building roads in 8 years wasn't done in the last 65 years. I think that before 2024 ends India's road infrastructure will be equal to that of America's road infrastructure. We'll be successful in it: Union minister Nitin Gadkari pic.twitter.com/i6oCEW9qHO
1991ರಲ್ಲಿ ಹಣಕಾಸು ಸಚಿವರಾಗಿ ಮನಮೋಹನ್ ಸಿಂಗ್ ರೂಪಿಸಿದ ಆರ್ಥಿಕ ಸುಧಾರಣೆಗಳ ಕಾರಣಕ್ಕೆ ದೇಶವು ಅವರಿಗೆ ಋಣಿಯಾಗಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.
ಮನಮೋಹನ್ ಸಿಂಗ್ ರೂಪಿಸಿದ ಸುಧಾರಣೆಗಳು ಬಡವರು ಮತ್ತು ರೈತರ ಬೆಳವಣಿಗೆಗೆ ಕಾರಣವಾಯಿತು. ಇದು ನನ್ನ ಅನುಭವಕ್ಕೆ ಬಂದಿದೆ ಎಂದರು. 90ರ ದಶಕದಲ್ಲಿ ನಾನು ಸಚಿವನಾಗಿದ್ದಾಗ ಹಣ ಸಂಗ್ರಹಿಸಿ ರಸ್ತೆಗಳನ್ನು ನಿರ್ಮಾಣ ಮಾಡಲು ಸಾಧ್ಯವಾಯಿತು ಎಂದು ಹೇಳಿದರು.
ಸದ್ಯ ಹೆದ್ದಾರಿ ಸಚಿವಾಲಯವು ಟೋಲ್ನಿಂದ ವಾರ್ಷಿಕ ₹40,000 ಕೋಟಿ ಆದಾಯಗಳಿಸುತ್ತಿದೆ. 2024ರ ವೇಳೆಗೆ ಇದು ₹1.40 ಲಕ್ಷ ಕೋಟಿಗೆ ಏರಿಕೆಯಾಗಲಿದೆ ಎಂದು ನಿತಿನ್ ಗಡ್ಕರಿ ವಿಶ್ವಾಸ ವ್ಯಕ್ತಪಡಿಸಿದರು. ಸದ್ಯ ಸಚಿವಾಲಯ ಯಾವುದೇ ಹಣಕಾಸು ಕೊರತೆ ಎದುರಿಸುತ್ತಿಲ್ಲ ಎಂದು ಹೇಳಿದರು.