‘ಆದರೆ ನಮ್ಮ ಪಕ್ಷಕ್ಕೆ ದೊರೆಯಲಿರುವ ಕ್ಷೇತ್ರಗಳಲ್ಲಿ ಬಹುತೇಕವು ಈಗಾಗಲೇ ಅಂತಿಮವಾಗಿವೆ. ರಾಜ್ಯದ ಪೂರ್ವಾಂಚಲದಲ್ಲಿ ಹಲವು ಕ್ಷೇತ್ರಗಳನ್ನು ನಮಗೆ ಬಿಟ್ಟುಕೊಡಲಾಗಿದೆ. ಪಶ್ಚಿಮಾಂಚಲದಲ್ಲಿ ಕೆಲವು ಕ್ಷೇತ್ರಗಳನ್ನು ಬಿಟ್ಟುಕೊಡಲಾಗಿದೆ. ಆದರೆ ಕೆಲವು ಕ್ಷೇತ್ರಗಳಲ್ಲಿನ ರಾಜಕೀಯ ಸ್ಥಿತಿ ಭಿನ್ನವಾಗಿದೆ. ಹೀಗಾಗಿ ಕೆಲವು ಕ್ಷೇತ್ರಗಳನ್ನು ಬದಲಿಸಬೇಕಿದೆ. ಯಾವ ಕ್ಷೇತ್ರ ಎನ್ನುವುದು ನಮಗೆ ಮುಖ್ಯವಲ್ಲ, ಗೆಲುವಷ್ಟೇ ಮುಖ್ಯ’ ಎಂದು ಅವರು ಹೇಳಿದ್ದಾರೆ.