ಇಂಡೋ– ಟಿಬೆಟಿಯನ್ ಗಡಿ ಪೊಲೀಸ್ ಮುಖ್ಯಸ್ಥ ಎಸ್.ಎಸ್. ದೇಸ್ವಾಲ್ ಅವರು , ’ತಾರ್ಕಿಕ ಅಂತ್ಯ ಸಿಗುವವರೆಗೆ ಅಥವಾ ಸುರಂಗದೊಳಗೆ ಸಿಲುಕಿರುವವರು ಸಿಗುವವರೆಗೆ ಎಷ್ಟೇ ದೂರ ಇದ್ದರೂ ಕಾರ್ಯಾಚರಣೆಯನ್ನು ಮುಂದುವರಿಸಲಾಗುವುದು. ಕಳೆದ ಐದು ದಿನಗಳಿಂದ ಆಹಾರ, ನೀರು ಇಲ್ಲದೇ ಸುರಂಗದೊಳಗೆ ಸಿಲುಕಿರುವವರ ಸ್ಥಿತಿ ಚಿಂತಾಜನಕವಾಗಿರಬಹುದು. ಆದರೆ ಸುರಂಗದೊಳಗೆ ತಾಪಮಾನ 20–25 ಡಿಗ್ರಿ ಸೆಲ್ಸಿಯಸ್ ಇರುವುದು, ಆಮ್ಲಜನಕದ ಲಭ್ಯತೆಯು ಅವರು ಬದುಕುಳಿದಿರುವ ಸಾಧ್ಯತೆಯ ಭರವಸೆಯನ್ನು ಮೂಡಿಸಿದೆ’ ಎಂದು ಹೇಳಿದ್ದಾರೆ.