ಕೋಲ್ಕತ್ತ: ಪರಾರಿಯಾಗಿರುವ ಪತ್ನಿಯ ಸುಳಿವು ನೀಡಿದವರಿಗೆ ಅಥವಾ ಹುಡುಕಿ ಕೊಟ್ಟವರಿಗೆ ₹ 5 ಸಾವಿರ ಬಹುಮಾನ ನೀಡುವುದಾಗಿ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪತ್ನಿಯನ್ನು ಹುಡುಕಿ ಕೊಡಿ ಎಂದು ಹೇಳಿರುವ ವ್ಯಕ್ತಿಯುಪಶ್ಚಿಮ ಬಂಗಾಳ ರಾಜ್ಯದವರು. ಇವರು ಹೈದರಾಬಾದ್ನಲ್ಲಿ ಬಡಗಿ ಕೆಲಸ ಮಾಡುತ್ತಿದ್ದಾರೆ. ಆತನಪತ್ನಿ ಹಾಗೂ ಮಗುಕೋಲ್ಕತ್ತ ಸಮೀಪದ ಪಿಂಗ್ಲಾ ಎಂಬ ಗ್ರಾಮದಲ್ಲಿ ವಾಸವಾಗಿದ್ದರು.
ನಮ್ಮ ಕುಟುಂಬಕ್ಕೆ ಪರಿಚಿತನಾದ ವ್ಯಕ್ತಿಯೊಬ್ಬ ಪತ್ನಿಗೆ ಮೊಬೈಲ್ ಫೋನ್ ಕೊಡಿಸಿದ್ದ. ಆಕೆಅವನೊಂದಿಗೆ ಹೆಚ್ಚು ಮಾತನಾಡುತ್ತಿದ್ದಳು. ಒಂದು ದಿನ ರಾತ್ರಿಮಗುವಿನೊಂದಿಗೆ ನಂಬರ್ ಪ್ಲೇಟ್ ಇಲ್ಲದ ನ್ಯಾನೊ ಕಾರಿನಲ್ಲಿ ಪರಾರಿಯಾಗಿದ್ದಾಳೆ.ಪೊಲೀಸ್ ಠಾಣೆಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಆ ವ್ಯಕ್ತಿ ಡಿಸೆಂಬರ್ 9ರಂದು ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದಾರೆ.
ಪತ್ನಿ ಕಿಟಕಿ ಮುರಿದು ಹೋಗಿರುವುದು ಗೊತ್ತಾಯಿತು. ಅವರನ್ನೂ ಎಲ್ಲ ಕಡೆ ಹುಡುಕಿದರೂಅವರು ಸಿಗಲಿಲ್ಲ. ಯಾರಿಗಾದರೂ ಸುಳಿವು ಸಿಕ್ಕರೆ ಅಥವಾ ಹುಡುಕಿಕೊಟ್ಟರೆ ಅವರಿಗೆ ₹ 5000 ಕೊಡುವುದಾಗಿ ಹೇಳಿದ್ದಾರೆ.
ಪತ್ನಿಗೆ ಮೊಬೈಲ್ ಕೊಡಿಸಿದ ಯುವಕನೊಂದಿಗೆ ಅಕ್ರಮ ಸಂಬಂಧ ಇತ್ತು. ನಾನು ಹೈದರಾಬಾದಿಗೆ ಕೆಲಸಕ್ಕೆ ಹೋದಾಗ ಮನೆಗೆ ಬರುತ್ತಿದ್ದ ಎಂದು ಅಕ್ಕ ಪಕ್ಕದವರು ಹೇಳಿದ್ದಾರೆ. ನನಗೆ ಆ ಯುವಕನ ಮೇಲೆ ಅನುಮಾನ ಎಂದು ಹೇಳಿದ್ದಾರೆ.
ಪತ್ನಿ ಮನೆಯಿಂದ ಹೋಗುವಾಗ ಹಣ, ಆಭರಣ, ಮಗುವಿನ ಜನನ ಪ್ರಮಾಣಪತ್ರ, ಆಧಾರ್ ಕಾರ್ಡ್ ತೆಗೆದುಕೊಂಡು ಹೋಗಿದ್ದಾರೆ. ಈ ಬಗ್ಗೆಸಾಮಾಜಿಕ ಜಾಲತಾಣಗಳಲ್ಲೂ ಪೋಸ್ಟ್ ಹಾಕಿದರೂ ಯಾವುದೇ ನೆರವು ಸಿಕ್ಕಿಲ್ಲ ಎಂದು ಆ ವ್ಯಕ್ತಿ ಹೇಳಿದ್ದಾರೆ.
ಪಶ್ಚಿಮ ಬಂಗಾಳ ಪೊಲೀಸರು ಈ ಘಟನೆ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಈ ಸುದ್ದಿ ಸಾಮಾಜಿಕ ಜಾಲತಾಣಗಳು ಸೇರಿದಂತೆ ಇಂಟರ್ನೆಟ್ನಲ್ಲಿಹೆಚ್ಚು ಶೇರ್ ಆಗುತ್ತಿದೆ.