‘ಬಿಜೆಪಿ ಗದ್ದಿ ಚೋಡೋ’ (ಬಿಜೆಪಿ ಅಧಿಕಾರ ಬಿಡಿ) ಅಭಿಯಾನದ ಉದಾಹರಣೆ ನೀಡಿದ ಅಜಯ್ ಕುಮಾರ್,‘ 90 ಲಕ್ಷ ಜನರೊಂದಿಗೆ ನೇರ ಸಂವಾದ ನಡೆಸುವ ನಿಟ್ಟಿನಲ್ಲಿ ಕಳೆದ ತಿಂಗಳು ಗ್ರಾಮ ಪಂಚಾಯತ್ ಮತ್ತು ವಾರ್ಡ್ಗಳಲ್ಲಿ ಕಾಂಗ್ರೆಸ್ ನಾಯಕರು ಮೂರು ದಿನಗಳನ್ನು ಕಳೆದರು. ಬೆಲೆ ಏರಿಕೆ, ನಿರುದ್ಯೋಗ, ರೈತರ ಸಂಕಷ್ಟ, ಬಡತನ, ಮೀಸಲಾತಿ, ಮಹಿಳೆಯರ ಭದ್ರತೆ, ಪ್ರಜಾಪ್ರಭುತ್ವದ ಕಗ್ಗೊಲೆ ಸೇರಿದಂತೆ ಇತರೆ ಸಮಸ್ಯೆಗಳ ಬಗ್ಗೆ ಜನರಿಗೆ ಬಿಜೆಪಿ ಮೇಲೆ ಆಕ್ರೋಶವಿದೆ. ಸಾಮಾನ್ಯ ಜನರು ಕಾಂಗ್ರೆಸ್ನೊಂದಿಗೆ ಇದ್ದಾರೆ’ ಎಂದು ಅವರು ತಿಳಿಸಿದರು.