13 ಐಪಿಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು: ರಾಮನಗರ, ಚಾಮರಾಜನಗರ ಮತ್ತು ಕೊಡಗು ಜಿಲ್ಲಾ ಎಸ್ಪಿಗಳು ಸೇರಿದಂತೆ 13 ಐಪಿಎಸ್ ಅಧಿಕಾರಿಗಳನ್ನು ಸರ್ಕಾರ ವರ್ಗಾವಣೆ ಮಾಡಿದೆ.
ವರ್ಗಾವಣೆ ವಿವರ: ಕಾರ್ತಿಕ್ ರೆಡ್ಡಿ– ಎಸ್ಪಿ, ರಾಮನಗರ; ವಿನಾಯಕ್ ವಸಂತರಾವ್ ಪಾಟೀಲ್– ಸಹಾಯಕ ಐಜಿಪಿ, ಬೆಂಗಳೂರು; ಕೆ. ಸಂತೋಷ್ ಬಾಬು– ಎಸ್ಪಿ, ಗುಪ್ತದಳ; ಡಿ. ದೇವರಾಜ್– ಡಿಸಿಪಿ, ಬೆಂಗಳೂರು ಉತ್ತರ ವಿಭಾಗ; ಡಿ.ಆರ್. ಸಿರಿಗೌರಿ– ಎಸ್ಪಿ, ಆಂತರಿಕ ಭದ್ರತಾ ವಿಭಾಗ; ಟಿ.ಪಿ. ಶಿವಕುಮಾರ್– ಎಸ್ಪಿ, ಕೆಪಿಟಿಸಿಎಲ್; ಶೇಖರ್ ಎಚ್. ಟೆಕ್ಕಣ್ಣನವರ್– ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ, ಬೆಳಗಾವಿ ನಗರ.
ಪದ್ಮಿನಿ ಸಾಹೂ– ಎಸ್ಪಿ ಚಾಮರಾಜನಗರ; ಪ್ರದೀಪ್ ಗುಂಟಿ– ಎಸ್ಪಿ, ಬಂದಿಖಾನೆ; ಗೀತಾ ಎಂ.ಎಸ್.– ಪ್ರಾಂಶುಪಾಲೆ, ಪೊಲೀಸ್ ತರಬೇತಿ ಶಾಲೆ, ಮೈಸೂರು; ಕೆ.ರಾಮರಾಜನ್– ಎಸ್ಪಿ, ಕೊಡಗು; ರವೀಂದ್ರ ಕಾಶಿನಾಥ್ ಗಡಾದಿ– ಡಿಸಿಪಿ, ಕಮಾಂಡ್ ಸೆಂಟರ್ ಮತ್ತು ಅಯ್ಯಪ್ಪ ಎಂ.ಎ.– ಎಸ್ಪಿ, ಗುಪ್ತದಳ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.