‘ಇದರಿಂದ ಕೋಪಗೊಂಡ ದೇವಾಲಯ ಸಮಿತಿಯ ಪ್ರಕಾಶ್ ಸೇರಿದಂತೆ ಇತರೇ ಸದಸ್ಯರು ಪೈಪ್ಗಳಿಂದ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ್ದಾರೆ. ನನ್ನ ಮಗನಿಗೆ ಕಾಲುಗಳಲ್ಲಿ ಒದ್ದು, ಹಲ್ಲೆ ಮಾಡಿದ್ದಾರೆ. ಟವೆಲ್ನಿಂದ ಕುತ್ತಿಗೆ ಬಿಗಿದಿದ್ದಾರೆ. ಇದರಿಂದ ಉಸಿರಾಡಲಿಕ್ಕೆ ಸಾಧ್ಯವಾಗದೆ ಅರೆಪ್ರಜ್ಞಾವಸ್ಥೆಗೆ ಜಾರಿದ್ದಾನೆ’ ಎಂದು ವಿದ್ಯಾರ್ಥಿಯ ತಂದೆ ಎ. ನಾರಾಯಣಸ್ವಾಮಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.