ಪ್ರಾಸಿಕ್ಯೂಷನ್ ಆಕ್ಷೇಪಣೆಯನ್ನು ಮಾನ್ಯ ಮಾಡಿರುವ ನ್ಯಾಯಾಧೀಶರು, ‘ಆರೋಪಿಯು ಕೃತ್ಯದಲ್ಲಿ ಭಾಗಿಯಾಗಿ ರುವ ಬಗ್ಗೆ ಮೇಲ್ನೋಟಕ್ಕೇ ಸಾಕಷ್ಟು ಪುಷ್ಟಿ ನೀಡುವಂತಿದೆ. ಹತ್ಯೆಯಾಗಿರುವ ಹರ್ಷ, ಗೋರಕ್ಷಣೆ ಮತ್ತು ಹಿಂದುತ್ವದ ಪ್ರತಿಪಾದನೆಯ ಕಟ್ಟಾ ಕಾರ್ಯಕರ್ತ ನಾಗಿದ್ದುದನ್ನು ಸಹಿಸದೆ ಹತ್ಯೆ ನಡೆಸ ಲಾಗಿದೆ ಎಂದು ತನಿಖಾಧಿಕಾರಿಗಳು ವಿವರಿಸಿದ್ದಾರೆ. ಹತ್ಯೆಗೂ ಮುನ್ನಜಾಫರ್ ತನ್ನ ಐ–20 ಕಾರನ್ನು ಉಳಿದ ಆರೋಪಿಗಳಿಗೆ ಸಂಚು ರೂಪಿಸಲು ಮಂಡಗದ್ದೆಗೆ ಕಳುಹಿಸಿಕೊಟ್ಟಿರುವ ಬಗ್ಗೆ ಪುರಾವೆ ಕಂಡು ಬರುತ್ತಿದೆ’ ಎಂದು ಆದೇಶದಲ್ಲಿ ವಿವರಿಸಿದ್ದಾರೆ.