ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶಿವನ ದೇಗುಲ ಕಟ್ಟಿದರೆ ಹಣ ಕೊಡಲು ಸಿದ್ಧ’

Last Updated 17 ಜನವರಿ 2021, 19:29 IST
ಅಕ್ಷರ ಗಾತ್ರ

ಮೈಸೂರು: ‘ರಾಮನ ಬದಲು ಶಿವನ ದೇಗುಲ ಕಟ್ಟಿದರೆ ಹಣ ಕೊಡಲು ಸಿದ್ಧ’ ಎಂದು ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಭಾನುವಾರ ಇಲ್ಲಿ ತಿಳಿಸಿದರು.

‘ಶಿವ ಈ ದೇಶದ ಆದಿ ದೈವ. ರಾಮ ಮತ್ತು ಕೃಷ್ಣ ಇಬ್ಬರೂ ಸಮಾನತೆ ಹರಿಕಾರ ಶಿವನನ್ನು ಪೂಜಿಸುತ್ತಾರೆ. ಶಿವನ ದೇಗುಲ ಕಟ್ಟಿದರೆ ಹಣ ಕೊಡಲು ಸಿದ್ಧ ಎಂದು ರಾಮ ಮಂದಿರ ನಿರ್ಮಾಣಕ್ಕೆ ಹಣ ಕೇಳಲು ಬಂದವರಿಗೆ ಹೇಳಿದ್ದೇನೆ’ ಎಂದರು.

‘ದೇವರು ಎಂದರೆ ಸಾವಿಲ್ಲದವನು. ಕೃಷ್ಣನು ಕಾಡಿನಲ್ಲಿ ಬೇಟೆಗಾರನೊಬ್ಬನ ಬಾಣಕ್ಕೆ ಬಲಿಯಾದರೆ, ಸರಯೂ ನದಿಗೆ ಬಿದ್ದು ರಾಮ ಆತ್ಮಹತ್ಯೆ ಮಾಡಿ ಕೊಳ್ಳುತ್ತಾನೆ. ಇವರಿಬ್ಬರೂ ದೇವ ರಾಗಲು ಸಾಧ್ಯವಿಲ್ಲ. ಚಾತುರ್ವಣ್ಯವನ್ನು ಪ್ರತಿಪಾದಿಸಿದವರು ಎಂಬ ಕಾರಣಕ್ಕೆ ಇವರನ್ನು ದೇವರನ್ನಾಗಿ ಮಾಡಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT