ಸಚಿವರ ಉತ್ತರಕ್ಕೆ ಕಟುವಾಗಿ ಪ್ರತಿಕ್ರಿಯಿಸಿದ ಅರವಿಂದ ಕುಮಾರ್ ಅರಳಿ, ‘ಬಿಜೆಪಿ ಸರ್ಕಾರ ಗೋಮಾತೆ ರಕ್ಷಣೆ ಬಗ್ಗೆ ಪದೇ ಪದೇ ಹೇಳುತ್ತದೆ. ಆದರೆ, ಗೋಮಾತೆ ರಕ್ಷಣೆಗೆ ಅಗತ್ಯ ಇರುವ ಉತ್ತಮ ಪಶುವೈದ್ಯಾಧಿಕಾರಿಗಳನ್ನು ರೂಪಿಸಲು ಸೌಲಭ್ಯಗಳನ್ನು ಕಲ್ಪಿಸುತ್ತಿಲ್ಲ. ವಿಶ್ವವಿದ್ಯಾಲಯ ಅಭಿವೃದ್ಧಿಗೆ ಸರ್ಕಾರದ ನಿರ್ಲಕ್ಷ್ಯವಹಿಸಿದೆ. ಈ ವಿಶ್ವವಿದ್ಯಾಲಯವನ್ನು ಸ್ಥಳಾಂತರಿಸುವ ಹುನ್ನಾರ ನಡೆದಿದೆ. ಇದು ಯಾವ ರೀತಿಯ ಅಭಿವೃದ್ಧಿ’ ಎಂದರು.