‘ಈಶ್ವರಪ್ಪ ಹಿರಿಯ ನಾಯಕರು. ಸಮಸ್ಯೆಯ ಬಗ್ಗೆ ಕುಳಿತು ಚರ್ಚೆ ಮಾಡಬಹುದಿತ್ತು. ಅದರ ಬದಲು ರಾಜ್ಯಪಾಲರಿಗೆ, ಪಕ್ಷದ ವರಿಷ್ಠರಿಗೆ, ನನಗೆ ಪತ್ರ ಬರೆದಿದ್ದಾರೆ. ಈಗಾಗಲೇ ಈಶ್ವರಪ್ಪ ಅವರೊಂದಿಗೆ ಮಾತುಕತೆ ನಡೆಸಲಾಗಿದೆ. ಸಮಸ್ಯೆಯನ್ನು ಪಕ್ಷದ ಚೌಕಟ್ಟಿನಲ್ಲಿ ಮಾತುಕತೆ ನಡೆಸಿ, ಎರಡು ದಿನದೊಳಗೆ ನಾನೇ ಪರಿಹಾರ ಮಾಡುತ್ತೇನೆ’ ಎಂದು ತಿಳಿಸಿದರು.