ಜನಸಾಮಾನ್ಯರನ್ನು ಕಾಡಲು ತೈಲ ದರ ಏರಿಕೆ ಪುನಃ ಆರಂಭಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣೆ ಮುಗಿದ ಬಳಿಕ ಪೆಟ್ರೋಲ್, ಡೀಸೆಲ್ ಮತ್ತು ಎಲ್ಪಿಜಿ ದರವನ್ನು ಏರಿಸಲು ತೈಲ ಕಂಪನಿಗಳಿಗೆ ಅವಕಾಶ ಮಾಡಿಕೊಡುತ್ತಾರೆ ಎಂಬ ನಿರೀಕ್ಷೆಯಿತ್ತು. ಅದು ಈಗ ನಿಜವಾಗಿದೆ. ಎಲ್ಪಿಜಿ ಒಂದು ಸಿಲಿಂಡರ್ಗೆ ₹50 ಏರಿಕೆಯಾಗಿದೆ. ಸೌದೆಯನ್ನು ಉರಿಸುತ್ತಿದ್ದವರ ಮೇಲಿನ ಬಿಜೆಪಿಯ ನಕಲಿ ಕಾಳಜಿಗೆ ಏನಾಯಿತು? ಎಂದು ಸಿದ್ದರಾಮಯ್ಯ ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.