ಈ ಪ್ರಶಸ್ತಿಯು ₹1 ಲಕ್ಷ ನಗದು ಮತ್ತು ಫಲಕ ಒಳಗೊಂಡಿದೆ. ಬೋಧಿವರ್ಧನ ಪ್ರಶಸ್ತಿಗೆ ಸಿಎಎ ವಿರುದ್ಧದ ಹೋರಾಟದಲ್ಲಿ ಶಾಹಿನ್ ಬಾಗ್ ದಾದಿ ಎಂದೇ ಹೆಸರಾದ ಬಿಲ್ಕಿಸ್ ಬಾನೊ, ರೈತ ಹೋರಾಟಗಾರ ಜೆ.ಎಂ. ವೀರಸಂಗಯ್ಯ, ಸಾಮಾಜಿಕ ಹೋರಾಟಗಾರ ವಿ. ನಾಗರಾಜ್, ಅಲೆಮಾರಿ ಸಮುದಾಯ ಮತ್ತು ಕೂಲಿ ಕಾರ್ಮಿಕರ ಪರ ಕೆಲಸ ಮಾಡುತ್ತಿರುವ ಶಾರದಾ ಮಾಳಗಿ ಮತ್ತು ಜೀವಪರ ಕಾಳಜಿಯೊಂದಿಗೆ ದುಡಿಯುತ್ತಿರುವ ‘ಮರ್ಸಿ ಏಂಜೆಲ್ಸ್’ ಸ್ವಯಂ ಸೇವಕರ ಗುಂಪನ್ನು ಆಯ್ಕೆ ಮಾಡಲಾಗಿದೆ. ಬೋಧಿವರ್ಧನ ಪ್ರಶಸ್ತಿಯು ತಲಾ ₹20 ಸಾವಿರ ನಗದು ಒಳಗೊಂಡಿದೆ.