ಚಿತ್ರದುರ್ಗ: ‘ನಿರ್ಣಯ ಕೈಗೊಳ್ಳಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ವತಂತ್ರರು. ನಾವು ಯಾವುದೇ ಒತ್ತಡ ಹಾಕುವುದಿಲ್ಲ’ ಎಂದು ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ತಿಳಿಸಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಉತ್ತಮ ಕೆಲಸ ಮಾಡಿದವರು ಕೆಟ್ಟ ಮಾತು ಕೇಳಲು ಸಿದ್ಧರಿರಬೇಕು. ಬಸವಣ್ಣನ ತತ್ವಕ್ಕೆ ಅನುಗುಣವಾಗಿ ನಡೆಯಬೇಕಿದೆ’ ಎಂದು ಪ್ರತಿಕ್ರಿಯೆ ನೀಡಿದರು.