ಶಾಸಕರ ಭವನದಲ್ಲಿ ಭಾನುವಾರ ಶೆಫರ್ಡ್ಸ್ ಇಂಡಿಯಾ ಇಂಟರ್ ನ್ಯಾಷನಲ್ ಮುಖಂಡರ ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಐವತ್ತು, ಅರವತ್ತು ಜನರು ಸಚಿವ ಸ್ಥಾನದ ಆಕಾಂಕ್ಷಿಗಳಿದ್ದೇವೆ. ಎಲ್ಲರಿಗೂ ಮಂತ್ರಿ ಸ್ಥಾನ ಸಿಗಲ್ಲ. ರಾಜಕೀಯ ಅಂದರೇನೇ ಅವಕಾಶ. ಸಚಿವ ಆಗಬೇಕು ಅಂತ ಹಠ, ಚಟಕ್ಕೆ ನಾನು ಬಿಜೆಪಿಗೆ ಬಂದಿಲ್ಲ’ ಎಂದರು.