ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಡಿ. ಪ್ರಕರಣ: ರಮೇಶ ಜಾರಕಿಹೊಳಿ ಗೋಕಾಕ್‌ನಲ್ಲಿ ಇದ್ದಾರೆ -ವಕೀಲ ಶ್ಯಾಮಸುಂದರ್

Last Updated 2 ಏಪ್ರಿಲ್ 2021, 7:12 IST
ಅಕ್ಷರ ಗಾತ್ರ

ಬೆಂಗಳೂರು: 'ರಮೇಶ ಜಾರಕಿಹೊಳಿ ಅವರಿಗೆ ಯಾವುದೇ ಬಂಧನದ ಭೀತಿಯಿಲ್ಲ. ಅನಾರೋಗ್ಯದ ಕಾರಣ ಹೊರಗೆ ಕಾಣಿಸುತ್ತಿಲ್ಲ. ಸದ್ಯ ಅವರು ಗೋಕಾಕ್‌ನಲ್ಲೇ ಇದ್ದಾರೆ' ಎಂದು ಅವರ ಪರ ವಕೀಲ ಶ್ಯಾಮಸುಂದರ್ ‌ಹೇಳಿದರು.

ಆಡುಗೋಡಿಯಲ್ಲಿರುವ ಸಿಸಿಬಿ ತಾಂತ್ರಿಕ ವಿಭಾಗ ಬಳಿ ಮಾತನಾಡಿದ ಅವರು, 'ಅನಾರೋಗ್ಯದ ಕಾರಣ ಎರಡು ದಿನದ ನಂತರ ವಿಚಾರಣೆ ನಡೆಸುವಂತೆ ಕೋರಿ ಕಾಲಾವಕಾಶ ಕೇಳಿದ್ದೇವೆ' ಎಂದರು.

'ಪರಿಶೀಲಿಸಿ ವಿಚಾರಣೆಯ ಮುಂದಿನ ದಿನಾಂಕದ ಬಗ್ಗೆ ನೋಟಿಸ್ ನೀಡುವುದಾಗಿ ಎಸ್ಐಟಿ ಅಧಿಕಾರಿಗಳು ಹೇಳಿದ್ದಾರೆ' ಎಂದೂ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT