ಬೆಂಗಳೂರು: 'ರಮೇಶ ಜಾರಕಿಹೊಳಿ ಅವರಿಗೆ ಯಾವುದೇ ಬಂಧನದ ಭೀತಿಯಿಲ್ಲ. ಅನಾರೋಗ್ಯದ ಕಾರಣ ಹೊರಗೆ ಕಾಣಿಸುತ್ತಿಲ್ಲ. ಸದ್ಯ ಅವರು ಗೋಕಾಕ್ನಲ್ಲೇ ಇದ್ದಾರೆ' ಎಂದು ಅವರ ಪರ ವಕೀಲ ಶ್ಯಾಮಸುಂದರ್ ಹೇಳಿದರು.
ಆಡುಗೋಡಿಯಲ್ಲಿರುವ ಸಿಸಿಬಿ ತಾಂತ್ರಿಕ ವಿಭಾಗ ಬಳಿ ಮಾತನಾಡಿದ ಅವರು, 'ಅನಾರೋಗ್ಯದ ಕಾರಣ ಎರಡು ದಿನದ ನಂತರ ವಿಚಾರಣೆ ನಡೆಸುವಂತೆ ಕೋರಿ ಕಾಲಾವಕಾಶ ಕೇಳಿದ್ದೇವೆ' ಎಂದರು.
'ಪರಿಶೀಲಿಸಿ ವಿಚಾರಣೆಯ ಮುಂದಿನ ದಿನಾಂಕದ ಬಗ್ಗೆ ನೋಟಿಸ್ ನೀಡುವುದಾಗಿ ಎಸ್ಐಟಿ ಅಧಿಕಾರಿಗಳು ಹೇಳಿದ್ದಾರೆ' ಎಂದೂ ಅವರು ತಿಳಿಸಿದರು.