ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್‌ ಅಧಿಕಾರಿ, ಸಿಬ್ಬಂದಿಗೆ ಮುಖ್ಯಮಂತ್ರಿ ಪದಕ

Last Updated 28 ಮಾರ್ಚ್ 2023, 19:56 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ 42 ಮಂದಿ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ 2022ನೇ ಸಾಲಿನ ಮುಖ್ಯಮಂತ್ರಿ ಪದಕ ಘೋಷಿಸಲಾಗಿದೆ. ಬೆಂಗಳೂರಿನ ಹಲವರು ಪದಕಕ್ಕೆ ಭಾಜನರಾಗಿದ್ದಾರೆ.

ಆರ್.ಶ್ರೀನಿವಾಸ್‌ಗೌಡ (ಡಿಸಿಪಿ, ಕೇಂದ್ರ ವಿಭಾಗ), ನಂಜುಂಡೇಗೌಡ (ಹೆಡ್ ಕಾನ್‌ಸ್ಟೆಬಲ್, ಪೂರ್ವ ಸಂಚಾರ ವಿಭಾಗ), ರೇವಣ್ಣ (ಎಎಸ್‌ಐ, ಕಾಮಾಕ್ಷಿಪಾಳ್ಯ ಸಂಚಾರ ಠಾಣೆ), ಮಾರುತಿ ಜಿ. ನಾಯಕ್ (ಇನ್‌ಸ್ಪೆಕ್ಟರ್, ಸುದ್ದುಗುಂಟೆಪಾಳ್ಯ), ಬಿ.ಮಹೇಶ್ (ಪಿಎಸ್‌ಐ, ಎನ್‌ಐಎ), ಎಂ.ಮೋಹನ್ ಕುಮಾರ್ (ಹೆಡ್‌ಕಾನ್‌ಸ್ಟೆಬಲ್, ವಿಕಾಸಸೌಧ ಭದ್ರತಾ ವಿಭಾಗ), ಚೈತನ್ಯ (ಇನ್‌ಸ್ಪೆಕ್ಟರ್‌, ಕಬ್ಬನ್‌ಪಾರ್ಕ್ ಠಾಣೆ), ಬಿ.ಮಹೇಶ್ (ಹೆಡ್‌ ಕಾನ್‌ಸ್ಟೆಬಲ್, ಬ್ಯಾಟರಾಯನಪುರ ಸಂಚಾರ ಠಾಣೆ), ಧರಣೇಶ್ (ಡಿವೈಎಸ್‌ಪಿ, ಸಂಚಾರ ಕೇಂದ್ರ ವಿಭಾಗ), ಅರವಿಂದಕುಮಾರ್ (ಹೆಡ್‌ ಕಾನ್‌ಸ್ಟೆಬಲ್, ಸಿಎಆರ್), ಅನಂತಕೃಷ್ಣ (ಎಎಸ್‌ಐ, ಸಿಸಿಬಿ), ಪ್ರಕಾಶ್ (ಎಎಸ್‌ಐ, ಕೆ.ಜಿ.ಹಳ್ಳಿ ಪೊಲೀಸ್ ಠಾಣೆ), ಬಿ.ಕೆ.ಲಕ್ಷ್ಮಣ್‌ (ಹೆಡ್‌ಕಾನ್‌ಸ್ಟೆಬಲ್, ಶಾಸಕರ ಭವನ ಭದ್ರತಾ ವಿಭಾಗ), ಎನ್.ಸುರೇಶ್ (ಪಿಐ, ಸಿಐಡಿ), ಬಿ.ಮಂಜುನಾಥ್ (ಹೆಡ್‌ ಕಾನ್‌ಸ್ಟೆಬಲ್, ವಿಕಾಸಸೌಧ ಭದ್ರತೆ), ಎಂ.ಅನಿತಾ ಕುಮಾರಿ (ಪಿಐ, ಎಸ್‌ಐಟಿ, ಲೋಕಾಯುಕ್ತ), ಎಂ.ಎಸ್.ರಮೇಶ್ (ಪಿಎಸ್‌ಐ, ಅಶೋಕನಗರ ಠಾಣೆ), ಬಿ.ಸುರೇಶ್ (ಹೆಡ್‌ಕಾನ್‌ಸ್ಟೆಬಲ್, ಸಿಎಆರ್), ಎಚ್.ಮುತ್ತು
ರಾಜ್ (ಪಿಐ, ವಿಧಾನಸೌಧ ಭದ್ರತಾ ವಿಭಾಗ), ಕೆ.ಪಿ.ಆನಂದ್‌ ಆರಾಧ್ಯ (ಹೆಡ್‌ ಕಾನ್‌ಸ್ಟೆಬಲ್, ಸಿಎಆರ್, ಕೇಂದ್ರ ವಿಭಾಗ), ಸುನಿಲ್ ಕುಮಾರ್ ತುಂಬದ (ಹೆಡ್‌ಕಾನ್‌ಸ್ಟೆಬಲ್, ಸಿಎಆರ್, ಸೆಂಟ್ರಲ್), ಎಸ್.ರೇಣುಕಯ್ಯ (ಹೆಡ್‌ಕಾನ್‌ಸ್ಟೆಬಲ್, ಸಿಎಆರ್), ಆನಂದಕುಮಾರ್ ಮೊಪಗಾರ (ಪಿಎಸ್‌ಐ, ಗೋವಿಂದಪುರ ಠಾಣೆ), ಎಂ.ಆರ್.ಮುದವಿ (ಡಿವೈಎಸ್‌ಪಿ, ಸಿಐಡಿ), ಎನ್.ಶ್ರೀಹರ್ಷ (ಡಿವೈಎಸ್‌ಪಿ, ಸಿಐಡಿ) ಅವರಿಗೆ ಮುಖ್ಯಮಂತ್ರಿ ಪದಕ ಘೋಷಣೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT