‘ಜಿಂಕೆ ಕೊಂದು ಚರ್ಮ, ಮಾಂಸ ಹಾಗೂ ಕೊಂಬು ಮಾರಿದರೆ ಹೆಚ್ಚು ಹಣ ಗಳಿಸಬಹುದೆಂದು ಆರೋಪಿ ಯೋಚಿಸಿದ್ದ. ನಂತರವೇ ಬೆಟ್ಟಕ್ಕೆ ಹೋಗಿ 5 ಜಿಂಕೆಗಳನ್ನು ಬೇಟೆಯಾಡಿ ಕೊಂದಿದ್ದ. ಅದರ ಮಾಂಸ, ಚರ್ಮ ಹಾಗೂ ಒಂದು ಕೊಂಬನ್ನು ತಮಿಳುನಾಡಿನ ಜನರಿಗೆ ಮಾರಾಟ ಮಾಡಿದ್ದ. ಐದು ಕೊಂಬುಗಳನ್ನು ಮನೆಯಲ್ಲೇ ಇಟ್ಟುಕೊಂಡಿದ್ದ. ಬೇಟೆಗೆ ಹೋದಾಗ ಆತನಿಗೆ ಆನೆ ದಂತವೊಂದು ಸಿಕ್ಕಿತ್ತು’ ಎಂದೂ ಹೇಳಿದರು.