ವಿಶ್ವದ ಇತಿಹಾಸದಲ್ಲೇ ದುಡಿಯುವ, ಶ್ರಮಿಕ ವರ್ಗ ರಚಿಸಿದ ಏಕೈಕ ಸಾಹಿತ್ಯವೆಂದರೆ ವಚನಗಳು. ವೇಶ್ಯಾವಾಟಿಕೆಯಿಂದ ಹೊರಬಂದ ಪುಣ್ಯಸ್ತ್ರೀಯರೂ ವಚನ ಸಾಹಿತ್ಯಕ್ಕೆ ಕೊಡುಗೆ ನೀಡಿದ್ದಾರೆ. ಇಂತಹ ಮೌಲ್ಯಗಳ ತಳಹದಿಯ ಮೇಲೆ ಹುಟ್ಟಿದ್ದೇ ಲಿಂಗಾಯತ ಧರ್ಮ. ನೆಲ, ಜೀವ, ಸಮಾಧಿ, ಸಂಸ್ಕೃತಿಯ ಬೇರುಗಳನ್ನು ಅದು ಒಳಗೊಂಡಿದೆ. ಅದು ಸಂವೇದನಾತ್ಮಕ ಧರ್ಮ ಎಂದು ಬಣ್ಣಿಸಿದರು.