ಹೇಳಿಕೆ ನೀಡದೇ ತೆರಳಿರುವ ಸಂತ್ರಸ್ತೆಯ ಮೊಬೈಲ್ ಫೋನ್ ಬಂದ್ ಆಗಿದ್ದು, ಸಂತ್ರಸ್ತೆ ಸ್ನೇಹಿತನೂ ನಗರ ತೊರೆದಿರುವ ಮಾಹಿತಿ ಲಭ್ಯವಾಗಿದೆ. ಹೀಗಾಗಿ, ವೈಜ್ಞಾನಿಕ ಮತ್ತು ತಾಂತ್ರಿಕ ಸಾಕ್ಷ್ಯಗಳನ್ನೇ ಆಧರಿಸಿ ಆರೋಪಪಟ್ಟಿ ಸಿದ್ಧಪಡಿಸುವ ಚಿಂತನೆ ನಡೆಸಿರುವ ಪೊಲೀಸರು, ಅದಕ್ಕೂ ಮುನ್ನ ಆರೋಪಿಗಳನ್ನು ಮಂಪರು ಪರೀಕ್ಷೆಗೆ ಒಳಪಡಿಸಲೂ ಸಿದ್ಧತೆ ನಡೆಸಿದ್ದಾರೆ.