‘ಬಿಜೆಪಿಯ ‘ಸ್ಮಾರ್ಟ್ ಸಿಟಿ’ ಎಂಬ ಕಣ್ಕಟ್ಟು ಯೋಜನೆಯ ಬಣ್ಣ ಮಳೆಯಲ್ಲಿ ತೊಳೆದುಕೊಂಡು ಹೋಗಿದೆ. ಸ್ಮಾರ್ಟ್ ಸಿಟಿ ಹಗರಣದ ಬಗ್ಗೆ ಬಿಜೆಪಿ ನಾಯಕರ ಮೌನವು, ಗುತ್ತಿಗೆದಾರರ ಜತೆ ಆ ಪಕ್ಷದ ನಾಯಕರೂ ಕಮಿಷನ್ ನುಂಗಿರುವ ಸಂಶಯ ಸೃಷ್ಟಿಸಿದೆ. ಈವರೆಗೂ ‘ಸ್ಮಾರ್ಟ್ ರಸ್ತೆ’ಯ ಗುಂಡಿಗಳಿಗೆ ಬಿದ್ದ ₹191 ಕೋಟಿಗೆ ಹೊಣೆ ಯಾರು’ ಎಂದು ಟ್ವೀಟ್ ಮೂಲಕ ಕಾಂಗ್ರೆಸ್ ಪ್ರಶ್ನಿಸಿದೆ.