ಹಿರಿಯೂರು ತಾಲ್ಲೂಕಿನ ಅಬ್ಬಿನಹೊಳೆ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರ ವ್ಯಕ್ತಿ ಶಿಕ್ಷೆಗೆ ಗುರಿಯಾದವನು. ಏಳು ವರ್ಷಗಳ ಹಿಂದೆ ಪತ್ನಿ ಮೃತಪಟ್ಟಿದ್ದರಿಂದ ಮಗಳೊಂದಿಗೆ ವಾಸವಾಗಿದ್ದನು. 16 ವರ್ಷದ ಮಗಳಿಗೆ ಗರ್ಭಪಾತವಾದ ಬಳಿಕ ಭ್ರೂಣವನ್ನು ಹೂತು ನಾಶಪಡಿಸಲು ಪ್ರಯತ್ನಿಸಿದ್ದನು ಎಂದು ಸರ್ಕಾರದ ಪರವಾಗಿ ವಾದ ಮಂಡಿಸಿದ ವಿಶೇಷ ಸರ್ಕಾರಿ ಅಭಿಯೋಜಕ ಬಿ.ಜಯರಾಮ್ ತಿಳಿಸಿದ್ದಾರೆ.