ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಳವಾಗುತ್ತಿರುವುದರಿಂದ ಇಲಾಖೆಯ ಆಯುಕ್ತ ಡಿ. ರಂದೀಪ್ ಪರಿಷ್ಕೃತ ಮಾರ್ಗಸೂಚಿ ಹೊರಡಿಸಿದ್ದಾರೆ. ‘ಕೋವಿಡ್ ಮೂರನೇ ಅಲೆಯ ಅವಧಿಯಲ್ಲಿ ಕೈಗೊಂಡ ಮುನ್ನೆಚ್ಚರಿಕಾ ಕ್ರಮಗಳಿಂದ ರೋಗದ ತೀವ್ರತೆ ಹೆಚ್ಚದಂತೆ ತಡೆಯಲು ಸಾಧ್ಯವಾಯಿತು. ಈಗ ಪ್ರಕರಣಗಳು ಹೆಚ್ಚಳವಾಗುತ್ತಿರುವುದರಿಂದ ವೈರಾಣುವಿನ ರೂಪಾಂತರಿ ಪತ್ತೆ ಹಚ್ಚಿ, ಅದರ ಸ್ವರೂಪ ಹಾಗೂ ಪರಿಣಾಮದ ಬಗ್ಗೆ ಅಧ್ಯಯನ ನಡೆಸಿ, ನಿಗಾ ಇಡಬೇಕಾಗುತ್ತದೆ. ಆದ್ದರಿಂದವೈರಾಣುವಿನ ವಂಶವಾಹಿ ಸಂರಚನಾ ವಿಶ್ಲೇಷಣೆ ಪರೀಕ್ಷೆಗೆ ಆದ್ಯತೆ ನೀಡಬೇಕು’ ಎಂದು ಹೇಳಿದ್ದಾರೆ.