<p><strong>ಬೆಂಗಳೂರು: </strong>ಕೋವಿಡ್–19 ನಿರ್ವಹಣೆಗೆ ಸಂಬಂಧಿಸಿದಂತೆ ರಾಜ್ಯದ ಎಲ್ಲ ಅಪ್ಲಿಕೇಷನ್ಗಳು ಮತ್ತು ತಂತ್ರಜ್ಞಾನಗಳನ್ನು ಏಕೀಕೃತಗೊಳಿಸಿ ಕಾರ್ಯನಿರ್ವಹಿಸಲು, ಸಮಿತಿಯೊಂದನ್ನು ರಚಿಸಲಾಗಿದೆ.</p>.<p>ಈ ಸಮಿತಿಗೆ ಹಿರಿಯ ಐಎಎಸ್ ಅಧಿಕಾರಿ ಹಾಗೂ ಕೋವಿಡ್ ವಾರ್ ರೂಮ್ ಉಸ್ತುವಾರಿ ಹೊತ್ತಿರುವ ವಿ.ಪೊನ್ನುರಾಜ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.</p>.<p>ಸದಸ್ಯರನ್ನಾಗಿ ಡಿ.ರಂದೀಪ್, ಡಾ.ಅರುಂಧತಿ ಚಂದ್ರಶೇಖರ್, ಬಿಸ್ವಜಿತ್ ಮಿಶ್ರಾ, ವಿಪಿನ್ ಸಿಂಗ್, ಕುಮಾರ್ ಪುಷ್ಕರ್, ಹರೀಶ್ ಮತ್ತು ಎಚ್.ಎಸ್.ಶರತ್ ಅವರನ್ನು ನೇಮಿಸಲಾಗಿದೆ.</p>.<p>ಪರಿಹಾರ್ ಪೋರ್ಟಲ್, ಸಂಪರ್ಕಿತರ ಪತ್ತೆ ಮಾಡುವ ಮೊಬೈಲ್ ಆ್ಯಪ್, ಕ್ವಾರಂಟೈನ್ ಆ್ಯಪ್, ಕ್ವಾರಂಟೈನ್ ಅಲರ್ಟ್ ಸಿಸ್ಟಮ್, ಆಸ್ಪತ್ರೆಗಳಲ್ಲಿ ಹಾಸಿಗೆಗಳ ನಿರ್ವಹಣೆಯ ವ್ಯವಸ್ಥೆಯ ಅಪ್ಲಿಕೇಷನ್ಗಳು ಸೇರಿ ಇತರ ಎಲ್ಲ ಆ್ಯಪ್ ಮತ್ತು ತಂತ್ರಜ್ಞಾನ ಏಕೀಕೃತಗೊಳಿಸಿ, ಮಾಹಿತಿ ನಿರ್ವಹಣೆ ಸುವ್ಯಸ್ಥಿತಗೊಳಿಸುವುದು ಈ ಸಮಿತಿಯ ಜವಾಬ್ದಾರಿಯಾಗಿದೆ.</p>.<p>ಸಮಿತಿ ಸಭೆ ಸೇರಲು ಆರಂಭಿಸಿದ ಬಳಿಕ ವಾರಕ್ಕೊಮ್ಮೆ ಸರ್ಕಾರಕ್ಕೆ ವರದಿ ನೀಡಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಕೋವಿಡ್–19 ನಿರ್ವಹಣೆಗೆ ಸಂಬಂಧಿಸಿದಂತೆ ರಾಜ್ಯದ ಎಲ್ಲ ಅಪ್ಲಿಕೇಷನ್ಗಳು ಮತ್ತು ತಂತ್ರಜ್ಞಾನಗಳನ್ನು ಏಕೀಕೃತಗೊಳಿಸಿ ಕಾರ್ಯನಿರ್ವಹಿಸಲು, ಸಮಿತಿಯೊಂದನ್ನು ರಚಿಸಲಾಗಿದೆ.</p>.<p>ಈ ಸಮಿತಿಗೆ ಹಿರಿಯ ಐಎಎಸ್ ಅಧಿಕಾರಿ ಹಾಗೂ ಕೋವಿಡ್ ವಾರ್ ರೂಮ್ ಉಸ್ತುವಾರಿ ಹೊತ್ತಿರುವ ವಿ.ಪೊನ್ನುರಾಜ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.</p>.<p>ಸದಸ್ಯರನ್ನಾಗಿ ಡಿ.ರಂದೀಪ್, ಡಾ.ಅರುಂಧತಿ ಚಂದ್ರಶೇಖರ್, ಬಿಸ್ವಜಿತ್ ಮಿಶ್ರಾ, ವಿಪಿನ್ ಸಿಂಗ್, ಕುಮಾರ್ ಪುಷ್ಕರ್, ಹರೀಶ್ ಮತ್ತು ಎಚ್.ಎಸ್.ಶರತ್ ಅವರನ್ನು ನೇಮಿಸಲಾಗಿದೆ.</p>.<p>ಪರಿಹಾರ್ ಪೋರ್ಟಲ್, ಸಂಪರ್ಕಿತರ ಪತ್ತೆ ಮಾಡುವ ಮೊಬೈಲ್ ಆ್ಯಪ್, ಕ್ವಾರಂಟೈನ್ ಆ್ಯಪ್, ಕ್ವಾರಂಟೈನ್ ಅಲರ್ಟ್ ಸಿಸ್ಟಮ್, ಆಸ್ಪತ್ರೆಗಳಲ್ಲಿ ಹಾಸಿಗೆಗಳ ನಿರ್ವಹಣೆಯ ವ್ಯವಸ್ಥೆಯ ಅಪ್ಲಿಕೇಷನ್ಗಳು ಸೇರಿ ಇತರ ಎಲ್ಲ ಆ್ಯಪ್ ಮತ್ತು ತಂತ್ರಜ್ಞಾನ ಏಕೀಕೃತಗೊಳಿಸಿ, ಮಾಹಿತಿ ನಿರ್ವಹಣೆ ಸುವ್ಯಸ್ಥಿತಗೊಳಿಸುವುದು ಈ ಸಮಿತಿಯ ಜವಾಬ್ದಾರಿಯಾಗಿದೆ.</p>.<p>ಸಮಿತಿ ಸಭೆ ಸೇರಲು ಆರಂಭಿಸಿದ ಬಳಿಕ ವಾರಕ್ಕೊಮ್ಮೆ ಸರ್ಕಾರಕ್ಕೆ ವರದಿ ನೀಡಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>