‘ನಾನು ಕೋವಿಡ್ನಿಂದ ಗುಣಮುಖನಾಗಿದ್ದೇನೆ. ಅನಿವಾರ್ಯವಾದರೆ ಮಾತ್ರ, ಆಯಾಸ ಆಗದಂತೆ ಹೊರಗಡೆ ಓಡಾಡುವಂತೆ ವೈದ್ಯರು ಸಲಹೆ ನೀಡಿದ್ದಾರೆ. ದೂರದ ಪ್ರಯಾಣ ಮಾಡಬಾರದು ಎಂಬ ಸೂಚನೆ ಇದೆ. ಪ್ರವಾಹ ಪೀಡಿತ ಕಲಬುರ್ಗಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಸಂತ್ರಸ್ತರಿಗೆ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳುವ ಕುರಿತು ನಿರಂತರವಾಗಿ ಅಧಿಕಾರಿಗಳಿಗೆ ಸೂಚನೆ ನೀಡುತ್ತಿದ್ದೇನೆ. ನಾನು ವೈಯಕ್ತಿಕವಾಗಿ ಅಲ್ಲಿಗೆ ಭೇಟಿ ನೀಡದೆ ಇರಬಹುದು. ಆದರೆ, ಉಪ ಮುಖ್ಯಮಂತ್ರಿಯಾಗಿ ನನ್ನ ಜವಾಬ್ದಾರಿ ನಿರ್ವಹಿಸುತ್ತಿದ್ದೇನೆ’ ಎಂದಿದ್ದಾರೆ.