‘ಗಡಿಯಲ್ಲಿ ನಾವು ಆರ್ಟಿ–ಪಿಸಿಆರ್ ಪರೀಕ್ಷೆ ಮಾಡಿದರೂ ಫಲಿತಾಂಶ ಬರಲು 72 ಗಂಟೆ ಹಿಡಿಯುತ್ತದೆ. ತರಕಾರಿ ಸಾಗಾಟ ಮಾಡುವವರು, ಪ್ರಯಾಣಿಕರು ಅಷ್ಟು ಹೊತ್ತು ಕಾಯುವುದು ಕಷ್ಟ. ಜೊತೆಗೆ ವಾಹನ ದಟ್ಟಣೆ ಹೆಚ್ಚುತ್ತದೆ. ಹೀಗಾಗಿ, ಥರ್ಮಲ್ ಸ್ಕ್ರೀನಿಂಗ್ ಮಾಡಿ ಸಮಸ್ಯೆ ಇಲ್ಲದಿದ್ದರೆ ಒಳಗೆ ಬಿಡುತ್ತಿದ್ದೇವೆ’ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.