‘ನಾರಾಯಣಪುರ ಬಡಾವಣೆ ತಿರುವಿನ ಮುಖ್ಯರಸ್ತೆಯಲ್ಲಿ ಕೆಲ ಕಾಂಗ್ರೆಸ್ ಕಾರ್ಯಕರ್ತರು ಸಾಗುವಾಗ ಬಿಜೆಪಿಯ ಪುಷ್ಪರಾಜ್ ಅವರು ಕಲ್ಲು ತೂರಿದ್ದು ಸಿದ್ದೇಶ್, ಸಚಿನ್ ಅವರಿಗೆ ಪೆಟ್ಟಾಗಿದೆ’ ಎಂದು ಕಾಂಗ್ರೆಸ್ ಜಿಲ್ಲಾ ವಕ್ತಾರ ಎಚ್.ಎಸ್.ಪುಟ್ಟಸ್ವಾಮಿ ದೂರಿದ್ದಾರೆ. ‘ಕಾಂಗ್ರೆಸ್ನ 83 ಮಂದಿಯನ್ನು ವಶಕ್ಕೆ ಪಡೆದು ಬಿಡುಗಡೆ ಮಾಡಲಾಗಿದೆ. ಪ್ರತಿಭಟನೆಗೆ ಯಾರಿಗೂ ಅನುಮತಿ ಕೊಟ್ಟಿರಲಿಲ್ಲ’ ಎಂದು ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಪ್ರತಿಕ್ರಿಯಿಸಿದರು.