ಕಡೂರು: ‘ಮಾತಿನಿಂದ ಜಗತ್ತನ್ನು ಮೆಚ್ಚಿಸಬಹುದು. ಆದರೆ, ನಮಗೆ ನಾವು ಸುಳ್ಳು ಹೇಳಿಕೊಳ್ಳಲು ಸಾಧ್ಯವಿಲ್ಲ. ಡಿ.ಕೆ.ಶಿವಕುಮಾರ್ ಅವರ ಅಂತರಂಗ ಅವರಿಗೇ ಗೊತ್ತು’ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ತಿರುಗೇಟು ನೀಡಿದರು.
‘ತತ್ವಜ್ಞಾನಿಯೋ ಅಥವಾ ಇನ್ನೇನೋ ಎಂಬುದನ್ನು ಸಚಿವ ರವಿ ನಿರ್ಧರಿಸಲಿ’ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಈ ಪ್ರತಿಕ್ರಿಯೆ ನೀಡಿದರು. ಅವರು ತಾಲ್ಲೂಕಿನ ಜೋಡಿಹೋಚಿಹಳ್ಳಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
‘ಹೊರಜಗತ್ತಿಗೆ ಸುಳ್ಳು ಹೇಳಿದರೂ ನಮ್ಮೊಳಗಿನ ಚೈತನ್ಯಕ್ಕೆ ಸುಳ್ಳು ಹೇಳಲಾಗದು. ದೇಹದೊಳಗಿನ ಭಗವಂತನನ್ನು ಮೆಚ್ಚಿಸಲು ಸುಳ್ಳಿನಿಂದ ಸಾಧ್ಯವಿಲ್ಲ. ನಮ್ಮೊಳಗಿನ ಚೈತನ್ಯ ಸದಾ ಎಚ್ಚರಿಸುತ್ತಿರುತ್ತದೆ. ಡಿ.ಕೆ.ಶಿವಕುಮಾರ್ ಯಾರೆಂದು ಅವರೇ ನಿರ್ಧರಿಸಲಿ’ ಎಂದು ಹೇಳಿದರು.