ಬೆಂಗಳೂರು: ಪಠ್ಯಪುಸ್ತಕ ಪೂರೈಕೆಯಲ್ಲಿನ ವಿಳಂಬಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಈ ಕುರಿತು ಬುಧವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಶೈಕ್ಷಣಿಕ ವರ್ಷ ಆರಂಭವಾಗುತ್ತಿದೆ, ಆದರೆ ಇನ್ನೂ ಸಹ ಪಠ್ಯಪುಸ್ತಕಗಳನ್ನು ಪೂರೈಸಲು ಈ ಸರ್ಕಾರಕ್ಕೆ ಸಾಧ್ಯವಾಗಿಲ್ಲ’ ಎಂದು ಆರೋಪಿಸಿದೆ.
‘ಪಠ್ಯಗಳಲ್ಲಿ 'ಪ್ರಾಪಗ್ಯಾಂಡ' ಸ್ಥಾಪಿಸಲು ಈ ಸರ್ಕಾರಕ್ಕೆ ಇರುವ ಆಸಕ್ತಿ ಮಕ್ಕಳ ಶಿಕ್ಷಣದ ಬಗ್ಗೆ ಇಲ್ಲ. ಆರ್ಎಸ್ಎಸ್ ಎಜೆಂಟ್ರಂತೆ ವರ್ತಿಸುವ ಅಸಮರ್ಥ ಶಿಕ್ಷಣ ಸಚಿವರಿಂದಾಗಿ ರಾಜ್ಯದ ಮಕ್ಕಳ ಭವಿಷ್ಯಕ್ಕೆ ದಾರಿ ಇಲ್ಲದಂತಾಗಿದೆ’ ಎಂದು ಕಾಂಗ್ರೆಸ್ ಟ್ವೀಟಿಸಿದೆ.
ಶೈಕ್ಷಣಿಕ ವರ್ಷ ಆರಂಭವಾಗುತ್ತಿದೆ, ಆದರೆ ಇನ್ನೂ ಸಹ ಪಠ್ಯಪುಸ್ತಕಗಳನ್ನು ಪೂರೈಸಲು ಈ ಸರ್ಕಾರಕ್ಕೆ ಸಾಧ್ಯವಾಗಿಲ್ಲ.
ಪಠ್ಯಗಳಲ್ಲಿ 'ಪ್ರೊಪೆಗಂಡಾ' ಸ್ಥಾಪಿಸಲು ಇರುವ ಆಸಕ್ತಿ ಮಕ್ಕಳ ಶಿಕ್ಷಣದ ಬಗ್ಗೆ ಇಲ್ಲ ಈ ಸರ್ಕಾರಕ್ಕೆ.
RSS ಏಜೆಂಟ್ನಂತೆ ವರ್ತಿಸುವ ಅಸಮರ್ಥ ಶಿಕ್ಷಣ ಸಚಿವರಿಂದಾಗಿ ರಾಜ್ಯದ ಮಕ್ಕಳ ಭವಿಷ್ಯಕ್ಕೆ ದಾರಿ ಇಲ್ಲದಂತಾಗಿದೆ.