ಮರಾಠಾ ಸಮುದಾಯದವರು ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ಅವರನ್ನು ಮಹಾರಾಷ್ಟ್ರ ಸರ್ಕಾರ 2ಎ ಪಟ್ಟಿಗೆ ಸೇರಿಸಿದೆ. ಅದೇ ರೀತಿ ರಾಜ್ಯದಲ್ಲೂ ತೀರ್ಮಾನ ಕೈಗೊಳ್ಳಬೇಕು ಎಂದ ಘೋಟ್ನೇಕರ, ಯಡಿಯೂರಪ್ಪ ಅವರ ಭಾಷಣದ ರೆಕಾರ್ಡಿಂಗ್ ಇದ್ದ ಸಿ.ಡಿ ಪ್ರದರ್ಶಿಸಿದರು. ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಧರಣಿಗೂ ಮುಂದಾದರು.