ಸಂಘವು ವಿವಿಧ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಡಾ.ಸಿ. ಚಂದ್ರಪ್ಪ ಅವರ ‘ಮಹಾಮಾನವನ ಮಹಾಯಾನ’ ಕೃತಿಯನ್ನು ಪ್ರಶಸ್ತಿಗೆ ಪರಿಗಣಿಸಲಾಗಿದೆ. ‘ಸಪ್ನಾ ವರ್ಷದ ಯುವ ಲೇಖಕ ಪ್ರಶಸ್ತಿ’ಗೆ ‘ಹಾಣಾದಿ’ ಕೃತಿಯ ಲೇಖಕ ಕಪಿಲ ಪಿ. ಹುಮನಾಬಾದೆ ಆಯ್ಕೆಯಾಗಿದ್ದಾರೆ. ‘ಕಣ್ವ ವರ್ಷದ ಪ್ರಕಾಶಕ’ ಪ್ರಶಸ್ತಿಗೆ ಅಂಕಿತ ಪುಸ್ತಕ ಪ್ರಕಾಶನದ ಪ್ರಕಾಶ್ ಕಂಬತ್ತಳ್ಳಿ ಭಾಜನರಾಗಿದ್ದಾರೆ. ಈ ಪ್ರಶಸ್ತಿಗಳು ತಲಾ ₹ 10 ಸಾವಿರ ನಗದು ಹಾಗೂ ಫಲಕವನ್ನು ಒಳಗೊಂಡಿದೆ.