ದೇವರಪುರ ಭದ್ರಗೊಳದ ಕಾಫಿ ಬೆಳೆಗಾರ ಸುಬ್ರಮಣಿ ಅವರ ಮನೆಯ ಸಮೀಪ ತಾಯಿಯೊಂದಿಗೆ ಬಂದ ಕಾಡಾನೆ ಮರಿ ಬಾಳೆ, ತೆಂಗು, ಅಡಿಕೆಯನ್ನು ತಿಂದು ಕಾಡಿನತ್ತ ಸಂಚರಿಸುವ ವೇಳೆಯಲ್ಲಿ ಮನೆಯ ಸಮೀಪದಲ್ಲೇ ಇದ್ದ ಶೌಚಾಲಯ ಗುಂಡಿಯ ಮೇಲಿನ ಸಿಮೆಂಟ್ ಹಾಸಿನ ಮೇಲೆ ಹೆಜ್ಜೆ ಇಟ್ಟಿದೆ. ಆನೆಯ ಭಾರ ತಡೆಯಲಾಗದೆ ಸಿಮೆಂಟ್ ಹಾಸು ಕುಸಿದಿದೆ. ಇದರೊಂದಿಗೆ ಆನೆ ಮರಿಯೂ ಕೂಡ ಗುಂಡಿಗೆ ಬಿದ್ದಿದೆ.