‘ಯಾವುದೇ ವಿಷಯದಲ್ಲಿ ಉತ್ತೀರ್ಣರಾಗಲು ನಿಗದಿ ಪಡಿಸಿರುವ ಅಂಕಗಳಿಗಿಂತ ಐದಾರು ಅಂಕಗಳು ಕಡಿಮೆ ಇದ್ದರೆ, ಎರಡು–ಮೂರು ಬಾರಿ ಅಂತಹ ಉತ್ತರ ಪತ್ರಿಕೆಗಳನ್ನು ಪರಿಶೀಲಿಸಿರುತ್ತೇವೆ. ಕೊನೆಗೆ, ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ನಿಗದಿತ ಅಂಕಗಳನ್ನು ನೀಡಿ ಉತ್ತೀರ್ಣ ಮಾಡಿರುತ್ತೇವೆ. ಆದರೂ ವಿದ್ಯಾರ್ಥಿಗಳು ಹೀಗೆ ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕಿದ್ದಾಗ, ಅವರು ಮೊದಲು ಪಡೆದಿದ್ದ ಅಂಕಗಳನ್ನೇ ನೀಡುತ್ತಾರೆ. ವಿದ್ಯಾರ್ಥಿಗಳು ಅನುತ್ತೀರ್ಣರಾಗುತ್ತಾರೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಮೌಲ್ಯಮಾಪಕರೊಬ್ಬರು ಹೇಳಿದರು.