ದಿಶಾ ರವಿ ಸುಸಂಸ್ಕೃತ ಕುಟುಂಬದವರು: ‘ಪರಿಸರ ಕಾರ್ಯಕರ್ತೆ ದಿಶಾ ರವಿ ಸುಸಂಸ್ಕೃತ ಮನೆತನಕ್ಕೆ ಸೇರಿದವರು. ಆದರೆ, ಅವರನ್ನು ಈ ವ್ಯವಸ್ಥೆ ನಡೆಸಿಕೊಂಡಿರುವ ರೀತಿ ಸರಿಯಲ್ಲ. ದೆಹಲಿ ಪೊಲೀಸರು ಯಾವುದೇ ಸೂಚನೆ ನೀಡದೆ, ಮನೆಗೆ ನುಗ್ಗಿ ದಾಖಲೆಗಳನ್ನು ಕೇಳಿದ್ದಾರೆ. ಒತ್ತಾಯದಿಂದ ದಿಶಾರ ಸಹಿ ಪಡೆದಿದ್ದಾರೆ. ಆದರೆ, ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಗೃಹ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪೊಲೀಸರು ಕಾನೂನು ಪಾಲಿಸಿದ್ದಾಗಿ ಸಮರ್ಥಿಸಿಕೊಂಡಿದ್ದಾರೆ’ ಎಂದು ರೈತ ಮುಖಂಡ ಕೆ.ಟಿ.ಗಂಗಾಧರ್ ಬೇಸರ ವ್ಯಕ್ತಪಡಿಸಿದರು.