ದೆಹಲಿಯಿಂದ ಭಾನುವಾರ ಬರಲಿರುವ ತಂಡ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜತೆ ಸಂಜೆ ಚರ್ಚೆ ನಡೆಸಲಿದೆ. ಬಳಿಕ ತಲಾ ಇಬ್ಬರನ್ನು ಒಳಗೊಂಡ ಮೂರು ತಂಡ ಪ್ರವಾಹಪೀಡಿತ ಜಿಲ್ಲೆಗಳಿಗೆ ಸೋಮವಾರ ಮತ್ತು ಮಂಗಳವಾರ ಭೇಟಿ ನೀಡಲಿದೆ. ಮಂಗಳವಾರ ಸಂಜೆ ಮತ್ತೆ ಮುಖ್ಯಮಂತ್ರಿ ಮತ್ತು ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ, ಬುಧವಾರ ದೆಹಲಿಗೆ ಮರಳಲಿದೆ.