‘ಕನ್ನಡದ ಸಾಹಿತ್ಯ, ಸಂಸ್ಕೃತಿ, ಇತಿಹಾಸ ರೋಚಕವಾಗಿದೆ. ತಮಿಳರು ಅಚ್ಚುಕಟ್ಟಾಗಿ ತಮ್ಮ ಇತಿಹಾಸವನ್ನು ಹೇಳುವುದರಿಂದ ಆ ಭಾಷೆಗೆ ಆದ್ಯತೆ ದೊರೆಯುತ್ತಿದೆ. ಅವರಿಗಿಂತಲೂ ಕನ್ನಡದ ಇತಿಹಾಸ ಪುರಾತನವಾಗಿದೆ. ಹೀಗಾಗಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮುನ್ನುಗ್ಗಿ ಹೇಳಿದರೆ ಮಾತ್ರ ನಮ್ಮ ವಿಚಾರಗಳನ್ನು ಕೇಳುತ್ತಾರೆ’ ಎಂದು ಹೇಳಿದರು.